Ad imageAd image

ನದಿ ದಾಟುವಾಗ ಮುಗುಚಿ ಬಿದ್ದು ಇಬ್ಬರು ಕಮಾಂಡೋಗಳು ಸಾವು

Bharath Vaibhav
ನದಿ ದಾಟುವಾಗ ಮುಗುಚಿ ಬಿದ್ದು ಇಬ್ಬರು ಕಮಾಂಡೋಗಳು ಸಾವು
WhatsApp Group Join Now
Telegram Group Join Now

ಕೊಲ್ಲಾಪುರ: ನದಿ ದಾಟುವಾಗ ಬೋಟ್ ಮುಗುಚಿ ಬಿದ್ದು ಇಬ್ಬರು ಕಮಾಂಡೋಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಘಡ್ ತಾಲೂಕಿನ ಹಾಜಗೋಳಿ ಬಳಿ ನಡೆದಿದೆ.

ವಿಜಯ್ ಕುಮಾರ್ (28) ಹಾಗೂ ದಿವಾಕರ್ ರಾಯ್ (26) ಮೃತರು. ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ತರಬೇತಿಗೆ ತೆರಳಿದ್ದ 6 ಕಮಂಡೋಗಳು ನದಿ ದಾಟುತ್ತಿದ್ದಾಗ ಏಕಾಏಕಿ ಬೋಟ್ ಮಗುಚಿ ಬಿದ್ದಿದೆ.ಇಬ್ಬರು ಕಮಾಂಡೋಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಉಳಿದ ನಾಲ್ವರು ನದಿಯಲ್ಲಿ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಜೆ ಎಲ್ ವಿಂಗ್ ಕಮಾಂಡ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!