Ad imageAd image

ಹಲ್ಲೆ ಪ್ರಕರಣ :ನಟ ಧ್ರುವ ಸರ್ಜಾ ಮ್ಯಾನೇಜರ್ ಅರೆಸ್ಟ್ 

Bharath Vaibhav
ಹಲ್ಲೆ ಪ್ರಕರಣ :ನಟ ಧ್ರುವ ಸರ್ಜಾ ಮ್ಯಾನೇಜರ್ ಅರೆಸ್ಟ್ 
WhatsApp Group Join Now
Telegram Group Join Now

ಬೆಂಗಳೂರು: ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಬಂಧಿಸಲಾಗಿದೆ.

ಬನಶಂಕರಿ ಠಾಣೆ ಪೋಲೀಸರು ಆರೋಪಿ ಅಶ್ವಿನ್ ನನ್ನು ಬಂಧಿಸಿದ್ದಾರೆ. ಮೇ 26ರಂದು ರಾತ್ರಿ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಲಾಗಿತ್ತು.

ಹರ್ಷ ಮತ್ತು ಸುಭಾಷ್ ಎಂಬುವರು ಹಲ್ಲೆ ಮಾಡಿದ್ದು, ಅವರ ವಿಚಾರಣೆ ನಡೆಸಿದಾಗ ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ ಹಲ್ಲೆ ಮಾಡಿಸಿರುವುದು ಗೊತ್ತಾಗಿತ್ತು.

ನಾಗೇಂದ್ರ ಧ್ರುವ ಸರ್ಜಾ ಅವರಿಗೆ ಕಾರು ಚಾಲಕನಾಗಿ ಕೆಲಸ ಮಾಡಿದ್ದ. ಆತನಿಗೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಸಾಥ್ ನೀಡಿದ್ದ ಎನ್ನುವುದು ಗೊತ್ತಾಗಿದೆ. ಪ್ರಶಾಂತ್ ಪೂಜಾರಿ ಅವರು ಧ್ರುವ ಸರ್ಜಾ ಗೆ ಆಪ್ತರಾಗಿದ್ದು, ಜಿಮ್ ನಲ್ಲಿ ಟ್ರೇನ್ ಮಾಡುತ್ತಿದ್ದರು.

ಇಬ್ಬರ ನಡುವಿನ ಆಪ್ತತೆಯನ್ನು ಸಹಿಸಿಕೊಳ್ಳದ ನಾಗೇಂದ್ರ ಮತ್ತು ಅಶ್ವಿನ್ ಹಲ್ಲೆ ಮಾಡಿಸಿದ್ದಾರೆ. ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಬಳಸಿಕೊಂಡು ಹಲ್ಲೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ. ತನಿಖೆಯ ವೇಳೆ ಅಶ್ವಿನ್ ಪಾತ್ರ ಇರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!