Ad imageAd image

ಇಡ್ಲಿ ಗಂಟಲಿಗೆ ಸಿಲುಕಿ 50 ವರ್ಷದ ವ್ಯಕ್ತಿ ಸಾವು 

Bharath Vaibhav
ಇಡ್ಲಿ ಗಂಟಲಿಗೆ ಸಿಲುಕಿ 50 ವರ್ಷದ ವ್ಯಕ್ತಿ ಸಾವು 
WhatsApp Group Join Now
Telegram Group Join Now

ಪಾಲಕ್ಕಾಡ್ : ಕೇರಳದ ಪಾಲಕ್ಕಾಡ್‌ನ ಕಂಜಿಕೋಡ್‌ನಲ್ಲಿ ಓಣಂ ಆಚರಣೆಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ತಿನ್ನುವ ಸ್ಪರ್ಧೆಯಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ಇಡ್ಲಿ ಗಂಟಲಿಗೆ ಸಿಲುಕಿ ದುರಂತ ಸಾವು ಕಂಡಿದ್ದಾರೆ.

ಮೃತ ಸುರೇಶ್, ಟ್ರಕ್ ಚಾಲಕ, ಕಂಜಿಕೋಡ್‌ನ ಆಲಮರಮ್ ಮೂಲದವರು.ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ.

ಸುರೇಶ್ ಅವರು ಮೂರು ಇಡ್ಲಿಗಳನ್ನು ಒಟ್ಟಿಗೆ ತಿನ್ನಲು ಪ್ರಯತ್ನಿಸಿದ್ದಾರೆ. ಅದರೆ ಇಡ್ಲಿ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ.

ಕಾಂಜಿಕೋಡು ಸಮೀಪದ ಕೊಲ್ಲಾಪುರದಲ್ಲಿ ಯುವ ಸಮೂಹ ಸ್ಪರ್ಧೆ ಆಯೋಜಿಸಿತ್ತು. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2014ರಲ್ಲಿ ಪಾಲಕ್ಕಾಡ್‌ನಿಂದ ಇದೇ ರೀತಿಯ ಘಟನೆ ವರದಿಯಾಗಿತ್ತು.

ಪಾಲಕ್ಕಾಡ್‌ನ ಚಿತ್ತೂರು ಬಳಿಯ ಅತಿಕೋಡ್‌ನಲ್ಲಿ 52 ವರ್ಷದ ವ್ಯಕ್ತಿಯೊಬ್ಬರು 2014ರ ತಿರುವೋಣಂ ದಿನದಂದು ಸ್ಪರ್ಧೆಯ ಭಾಗವಾಗಿ ತಿನ್ನುತ್ತಿದ್ದ ಇಡ್ಲಿ ಗಂಟಲಿಗೆ ಸಿಲುಕಿ ಸಾವನ್ನಪ್ಪಿದ್ದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!