Ad imageAd image

ಕ್ಷೌರಕ್ಕಾಗಿ ನಡೆದ ವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ವಿರೋಧಿಸಿ ! ಸಂಗನಾಳ ಚಲೋ ಸಮಾವೇಶ !..

Bharath Vaibhav
ಕ್ಷೌರಕ್ಕಾಗಿ ನಡೆದ ವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ವಿರೋಧಿಸಿ ! ಸಂಗನಾಳ ಚಲೋ ಸಮಾವೇಶ !..
WhatsApp Group Join Now
Telegram Group Join Now

ಸಿಂಧನೂರು :-ದಲಿತ ಧಮನಿತರ ಮೇಲಿನ ದೌರ್ಜನ್ಯ ಕೊಲೆ ವಿರೋಧಿಸಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪನ ಕೊಲೆ ಪ್ರಕರಣ ಖಂಡಿಸಿ ಸಪ್ಟಂಬರ್ 17ರಿಂದ 19 ರವರೆಗೆ ಸಂಗನಾಳ ಗ್ರಾಮದಲ್ಲಿ ನಡೆಯುವ ಶಾಂತಿ – ಸೌಹಾರ್ದ ಸಮಾವೇಶದಲ್ಲಿ ಭಾಗಿಯಾಗಲು. ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಂಡದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲು ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿ 18 ಸಪ್ಟಂಬರ್ 2024ರಂದು ಸಿಂಧನೂರಿನಿಂದ ಸಂಗನಾಳ ಚಲೋ ಸೌಹಾರ್ದ ಸಮಾವೇಶಕ್ಕೆ ಭಾಗವಹಿಸಲು ಸಮಾನ ಬದುಕಿನತ್ತ ಅರಿವಿನ ಜಾಥಾದ ಅಡಿಯಲ್ಲಿ ಕೊಪ್ಪಳ ಜಿಲ್ಲಾಡಳಿತದ ಕಚೇರಿಯಿಂದ ಸಂಗನಾಳ ಗ್ರಾಮದವರೆಗೆ ಕಾಲ್ ಜಾಥಾ ಚಲೋ ಸಮಾವೇಶಕ್ಕೆ ನೂರಾರು ಜನರನ್ನು ಕರೆ ತರಲು ಸಭೆ ತೀರ್ಮಾನಿಸಿತು.

ಈ ಸಂದರ್ಭದಲ್ಲಿ – ದಲಿತ ಮತ್ತು ಪ್ರಗತಿಪರ ಹೋರಾಟಗಾರರು – ಪ್ರಗತಿಪರ ಚಿಂತಕರುಗಳಾದ.ಅಶೋಕ್ ನಂಜಲದಿನ್ನಿ.. ಚಂದ್ರಶೇಖರ್ ಗೊರಬಾಳ.. ನಾಗರಾಜ್ ಪೂಜಾರಿ.. ರಮೇಶ್ ಪಾಟೀಲ್ ಬೇರ್ಗಿ.. ಬಿ.ಎನ್. ಎರ್ದಿಹಾಳ.. ಆರ್. ಎಚ್.ಕಲ್ಮಂಗಿ.. ಪಂಪಾಪತಿ ತಿಡಿಗೋಳು.. ನಿರುಪಾದಿಪ್ಪ ಎಲೆಕೂಡ್ಲಿಗಿ.. ಗ್ಯಾನಪ್ಪ ಬಸಾಪುರ.ಈ.ಜೆ.. ಇದ್ದರು

ವರದಿ– ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!