Ad imageAd image

ಪೌರ ಕಾರ್ಮಿಕರ ಯೋಜನೆಗಳ ಸದುಪಯೋಗ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಿ: ಮಹಾದೇವಮ್ಮ ಗುತ್ತಿಗೆದಾರ..

Bharath Vaibhav
ಪೌರ ಕಾರ್ಮಿಕರ ಯೋಜನೆಗಳ ಸದುಪಯೋಗ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಿ: ಮಹಾದೇವಮ್ಮ ಗುತ್ತಿಗೆದಾರ..
WhatsApp Group Join Now
Telegram Group Join Now

ಮುದಗಲ್ಲ :- ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತೀ ಮುಖ್ಯವಾಗಿದೆ. ಪೌರ ಕಾರ್ಮಿಕರ ಹಿತ ಕಾಪಾಡಲು ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡೆದು ಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಪೌರ ಕಾರ್ಮಿಕರಿಗೆ ಪುರಸಭೆ ಅಧ್ಯಕ್ಷ ರಾದ ಮಹಾದೇವಮ್ಮ ಗುತ್ತೇದಾರ ಕರೆ ನೀಡಿದ್ದಾರೆ.ಪೌರ ಕಾರ್ಮಿಕರು ದಿನಾಚರಣೆ ಪ್ರಯುಕ್ತ ಖಾಯಂ 34 ಪೌರ ಕಾರ್ಮಿಕರಿಗೆ ವಿಶೇಷ ಭತ್ಯೆ ರೂ. 7 ಸಾವಿರ ಚೆಕ್‍ನ್ನು ಹಾಗೂ ಸಮವಸ್ತ್ರ ಸಾಂಕೇತಿಕವಾಗಿ ಪೌರ ಕಾರ್ಮಿಕರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್ಷ್ , ಪೌರ ಕಾರ್ಮಿಕರಾದ ಬಸವರಾಜ ಕಟ್ಟಿಮನಿ , ಹುಲಗಪ್ಪ ಪೂಜರಿಸಿದ್ದಮ್ಮ ,ಸರಸ್ವತಿ, ಜಿ .ಹುಲಗಪ್ಪ ,ಮುತ್ತಪ್ಪ ,ಶರಣಪ್ಪ, ಜಿ ಬಸವರಾಜ, ರಮೇಶ ಹಟ್ಟಿ , ಆದಿಬಸವರಾಜ
ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!