Ad imageAd image

ಪ್ರತಿ ಬೂತ್ ಮಟ್ಟದಲ್ಲಿ ಜರುಗಲಿ ಬಿ.ಜೆ.ಪಿ ಸದಸ್ಯತ್ವ ಅಭಿಯಾನ , ಕಾರ್ಯಕ್ರಮ

Bharath Vaibhav
ಪ್ರತಿ ಬೂತ್ ಮಟ್ಟದಲ್ಲಿ ಜರುಗಲಿ ಬಿ.ಜೆ.ಪಿ ಸದಸ್ಯತ್ವ ಅಭಿಯಾನ , ಕಾರ್ಯಕ್ರಮ
WhatsApp Group Join Now
Telegram Group Join Now

ಬಾದಾಮಿ :-ತಾಲೂಕಿನ ಕೆರೂರು ನಗರ ಹಾಗೂ ಗುಳೇದಗುಡ್ಡದಲ್ಲಿಯೂ ಭಾರತೀಯ ಜನತಾ ಪಾರ್ಟಿ ಬಿಜೆಪಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಬಿ.ಜೆ.ಪಿ ಪಕ್ಷದ ಸದಸ್ಯತಾ ಅಭಿಯಾನದ ಅಂಗವಾಗಿ ಬಾದಾಮಿ ಮತಕ್ಷೇತ್ರದ ಕೆರೂರು ನಗರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ವಿಶೇಷ ಸಭೆ ಆಯೋಜನೆ ಮಾಡಲಾಗಿತ್ತು. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿ.ಜೆ.ಪಿ ಸದಸ್ಯತಾ ಅಭಿಯಾನವನ್ನು ಪ್ರತಿ ಬೂತ್ ಮಟ್ಟದಲ್ಲಿ ದಾಖಲೆಯ ಪ್ರಮಾಣದಲ್ಲಿ ಸದಸ್ಯತಾ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ನಮ್ಮೆಲ್ಲ ಕಾರ್ಯಕರ್ತರು ಸಮರ್ಪಣಾ ಭಾವದಿಂದ ಶ್ರಮಿಸಬೇಕೆಂದು ಕರೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಸಂಸದರಾದ ಪಿ ಸಿ ಗದ್ದಿಗೌಡ್ರ, ಬಿಜೆಪಿ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಶಾಂತಗೌಡ. ಟಿ. ಪಾಟೀಲ, ಬಾದಾಮಿ ಮಂಡಲ ಅಧ್ಯಕ್ಷರಾದ ಯುವಮುಖಂಡ ನಾಗರಾಜ. ಎಸ್. ಕಾಚಟ್ಟಿ,ಪಕ್ಷದ ಹಿರಿಯರಾದ ಬಿ ಪಿ ಹಳ್ಳೂರ ವಕೀಲರು, ಎಫ್. ಆರ್. ಪಾಟೀಲ, ಮುತ್ತು ಉಳ್ಳಾಗಡ್ಡಿ, ಅಶೋಕ ಎಲಿಗಾರ, ಮಹಾಂತೇಶ ತಳವಾರ ಸೇರಿದಂತೆ ಕೆರೂರು ಹಾಗೂ ಗುಳೇದಗುಡ್ಡ ಭಾಗದ ಪಕ್ಷದ ಮುಖಂಡರು ಇನ್ನೂ ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!