Ad imageAd image

ತಾಳಮಡಗಿ ಪಿಕೆಪಿಎಸ್ ವಾರ್ಷಿಕ ಮಹಾಸಭೆ

Bharath Vaibhav
ತಾಳಮಡಗಿ ಪಿಕೆಪಿಎಸ್ ವಾರ್ಷಿಕ ಮಹಾಸಭೆ
WhatsApp Group Join Now
Telegram Group Join Now

ಚಿಟಗುಪ್ಪ :-ತಾಲೂಕಿನ ತಾಳಮಡಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶುಕ್ರವಾರ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಸಭೆಯಲ್ಲಿ 2023-24ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ನಾಗನಕೇರಾ ಅವರು ರೈತರಿಗೆ ಓದಿ ಹೇಳುವ ಮೂಲಕ ಸಭೆಗೆ ವರದಿಯನ್ನ ಮಂಡಿಸಿದರು.

ಬಳಿಕ ಪ್ರಸ್ತುತ ವರ್ಷದಲ್ಲಿ ಬಂದ ಒಟ್ಟು ಲಾಭ ಮತ್ತು ಖರ್ಚಿನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.ನಂತರ ಪಿಕೆಪಿಎಸ್ ಅಧ್ಯಕ್ಷ ಬಾಬುರಾವ ಪೊಲೀಸ್ ಪಾಟೀಲ ಮಾತನಾಡಿ,ರೈತರ ಸಹಕಾರದಿಂದ ಈ ವರ್ಷ ನಮ್ಮ ಸೊಸೈಟಿಗೆ ಅಧಿಕ ಲಾಭವಾಗಿದೆ.ಇದೆ ರೀತಿಯಲ್ಲಿ ರೈತರು ಇನ್ನೂ ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಪಿಕೆಪಿಎಸ್ ಸೊಸೈಟಿಯನ್ನು ಇನ್ನೂ ಅಧಿಕವಾಗಿ ಲಾಭಗೊಳಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಡಳಿಯ ಉಪಾಧ್ಯಕ್ಷ ಪೇಂಟೆಪ್ಪ ಔರಂಗಬಾದ,ರೇವಣಸಿದ್ಧಯ್ಯ ಸ್ವಾಮಿ, ಶಿವಕುಮಾರ ಪಾಟೀಲ,ರಾಜಕುಮಾರ ಹಲಸಿ,ಚಂದ್ರಶೇಟ್ಟಿ ಮಸನಿ,ಶಿವಪುತ್ರ ಮೇತ್ರೆ, ವಿವೇಕಾನಂದ ದೌಲತಾಬಾದ,ಮೆಹೇಬೂಬ್ ಖಾನ್ ಪಟೇಲ್,ಲಲಿತಾಬಾಯಿ ಸೇರಿದಂತೆ ಪಿಕೆಪಿಎಸ್ ಸಿಬ್ಬಂದಿಗಳು,ರೈತರು,ಮುಖಂಡರು ಭಾಗಿಯಾಗಿದ್ದರು.

 ವರದಿ:-   ಸಜೀಶ ಲಂಬುನೋರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!