Ad imageAd image

ಮುಡಾ ಹಗರಣದ ಲೂಟ್ಯಾಧಿಪತಿ : ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯ

Bharath Vaibhav
ಮುಡಾ ಹಗರಣದ ಲೂಟ್ಯಾಧಿಪತಿ : ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯ
siddaramaiah
WhatsApp Group Join Now
Telegram Group Join Now

ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಆರೋಪದ ಬಗ್ಗೆ ರಾಜ್ಯ ಬಿಜೆಪಿಯು ಕನ್ನಡದ ಕೋಟ್ಯಾಧಿಪತಿ ಯಾರು ಎಂಬ ಮಾದರಿಯಲ್ಲೇ ಮುಡಾ ಹಗರಣದ ಲೂಟ್ಯಾಧಿಪತಿ ಯಾರು ಎಂದು ಟೀಕಿಸುವ ಮೂಲಕ ಪ್ರಶ್ನೆ ಎತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿ, ಸಮಾಜವಾದಿ ಮುಖವಾಡ ಧರಿಸಿಕೊಂಡೇ, ನಿವೇಶನ ರಹಿತ ಬಡವರಿಗೆ ಹಂಚಬೇಕಿದ್ದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಿವೇಶನಗಳನ್ನು ಅಕ್ರಮವಾಗಿ ಕಬಳಿಸಿರುವ ಮಜವಾದಿ ಯಾರು? ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ ಎಂದಿರುವ ಬಿಜೆಪಿಯು, 4 ಆಯ್ಕೆಗಳನ್ನು ವ್ಯಂಗ್ಯವಾಗಿ ನೀಡಿದೆ.

ಮುಡಾ ಭ್ರಷ್ಟಾಚಾರ ಪ್ರಕರಣದಲ್ಲಿ ಬಡವರ ನಿವೇಶನಗಳನ್ನು ಅಕ್ರಮವಾಗಿ ಬಳಿಸಿದ ಸಾವಿರಾರು ಕೋಟಿ ರೂಪಾಯಿ ಹಗರಣದ ರೂವಾರಿ ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿ.ಕೆ.ಶಿವಕುಮಾರ್ ಅಥವಾ ಸಚಿವ ಬೈರತಿ ಸುರೇಶ್ ಇಲ್ಲವೇ ಸಚಿವ ಜಿ.ಪರಮೇಶ್ವರ್​ ಎಂದು ಕೇಳಿದೆ. ಇದಕ್ಕೆ ಸರಿಯಾದ ಉತ್ತರ ಸಿದ್ದರಾಮಯ್ಯ ಎಂದು ಬಿಜೆಪಿಯೇ ಆರೋಪಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!