ಹುಕ್ಕೇರಿ:- ಡಿಸೆಂಬರ್ 21 22 23ರಂದು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಸಭೆ ನಡೆಸಲಾಗುವುದು.ಇಂದು ಹುಕ್ಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ರಥ ಆಗಮಿಸಿದೆ
ಹುಕ್ಕೇರಿಯ ತಾಲೂಕ ತಹಶೀಲ್ದಾರ್ ಹಾಗೂ ಶಿಕ್ಷಣ ಅಧಿಕಾರಿಗಳು ರಕ್ಷಣಾ ವೇದಿಯ ಸಂಘಟನೆ ಪದಾಧಿಕಾರಿಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥ ಅದ್ದೂರಿಯಾಗಿ ಬರಮಾಡಿಕೊಂಡರು
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಜರುಗುವ ಡಿಸೆಂಬರ್ 21 22 23 ರಂದು ಈ ದಿನಾಂಕದಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ಇಡೀ ಕರ್ನಾಟಕದ ತುಂಬಾ ಕನ್ನಡದ ಜ್ಯೋತಿರಥ ಹುಕ್ಕೇರಿಯಲ್ಲಿ ಇವತ್ತು ಆಗಮಿಸಿದೆ ನಾಡು ನುಡಿಯ ಸಂಸ್ಕೃತಿ ಪ್ರತ್ಯೇಕವಾಗಿ ಸಂಗೀತ ಮತ್ತು ಕಲೆ ಇವೆಲ್ಲವೂ ಕೂಡ ಕರ್ನಾಟಕದಲ್ಲಿ ಅತಿ ದೀರ್ಘವಾದ ಇತಿಹಾಸ ಹೊಂದಿದೆ .
ಈ ಸಮ್ಮೇಳನದಲ್ಲಿ ಕನ್ನಡದ ಸಾಂಸ್ಕೃತಿಕ ಕುರಿತು ಜನರಿಗೆ ಒಡಂಬಡಿಸಲು ಇಡೀ ಕರ್ನಾಟಕ ತುಂಬಾ ಸಂಚರಿಸುತ್ತಾ ಇದೆ ಅತಿ ವಿಜೃಂಭಣೆಯಿಂದ ಸಮ್ಮೇಳನ ಮಂಡ್ಯದಲ್ಲಿ ಜರುಗುತ್ತಿದೆ ಇಂದು ಹುಕ್ಕೇರಿಯಲ್ಲಿ ಹಾಗೂ ಸಂಕೇಶ್ವರದಲ್ಲಿ ಆಗಮಿಸ್ತಾಯಿದೆ ಇದನ್ನು ನಾವು ಬಹಳಷ್ಟು ಆತ್ಮೀಯವಾಗಿ ಹುಕ್ಕೇರಿ ಆಡಳಿತ ಮಂಡಳಿ ಪರವಾಗಿ ತಹಶೀಲ್ದಾರರ ಪರವಾಗಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಹಾಗೂ ಎಲ್ಲ ಕನ್ನಡದ ಮನಸುಗಳ ಪರವಾಗಿ ಈರಥದ ಸ್ವಾಗತವನ್ನು ಶುಭವಾಗಲಿ ಎಂದು ಹಾರೈಸುತ್ತೇವೆ ಈ ಸಂದರ್ಭದಲ್ಲಿ ಹುಕ್ಕೇರಿಯ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯ ಎಲ್ಲ ಪದಾಧಿಕಾರಿಗಳು ಈ ರಥಯಾತ್ರೆಯಲ್ಲಿ ಭಾಗಿಯಾಗಿದ್ದರು.
ವರದಿ:-ಶಾಂತಿನಾಥ್ ಜಿ ಮಗದುಮ