Ad imageAd image

ಪತ್ರಕರ್ತನ ಪತ್ನಿಗೆ ಆಯಸಿಡ್ ಹಾಕುತ್ತೇನೆ ಜೀವ ಬೆದರಿಕೆ : ಆರೋಪಿ ವಿರುದ್ಧ ದೂರು ದಾಖಲು

Bharath Vaibhav
ಪತ್ರಕರ್ತನ ಪತ್ನಿಗೆ ಆಯಸಿಡ್ ಹಾಕುತ್ತೇನೆ ಜೀವ ಬೆದರಿಕೆ : ಆರೋಪಿ ವಿರುದ್ಧ ದೂರು ದಾಖಲು
CRIME
WhatsApp Group Join Now
Telegram Group Join Now

ಬೆಂಗಳೂರು: ಆಯಸಿಡ್ ಹಾಕುತ್ತೇನೆ ಅಂತ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಗೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ಬಗ್ಗೆ ಮಹಿಳೆಯ ಪತಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಹಾಕಿದ್ದು, ಆರೋಪಿಯ ವಿರುದ್ಧ ಕ್ರಮಕೈಗೊಳ್ಳಿ ಎಂದು ಕರ್ನಾಟಕ ಡಿಜಿಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್​ ಮಾಡಿದ್ದಾರೆ. ನಿಕಿತ್​ ಶೆಟ್ಟಿ ಜೀವ ಬೆದರಿಕೆ ಹಾಕಿದ ಆರೋಪಿ.​

ಆರೋಪಿ ನಿಕಿತ್​ ಶೆಟ್ಟಿ ಪತ್ರಕರ್ತ ಶಹಭಾಜ್​ ಅನ್ಸರ್​ ಅವರ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಹೌದು, ಪತ್ರಕರ್ತ ಶಹಭಾಜ್​ ಅನ್ಸರ್​ ಅವರ ಪತ್ನಿಗೆ ಆಯಸಿಡ್​ ಹಾಕುತ್ತೇನೆ ಎಂದು ಆರೋಪಿ ನಿಕಿತ್​ ಶೆಟ್ಟಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಹಾಕಿದ್ದಾನೆ.

ಇನ್ನು, ಆರೋಪಿ ನಿಕಿತ್​ ಶೆಟ್ಟಿ ಬಟ್ಟೆ ತೊಡುವ ವಿಚಾರವಾಗಿ ಬೆದರಿಕೆ ಹಾಕಿದ್ದಾನೆ. ‘ ಕರ್ನಾಟಕದಲ್ಲಿ ಒಳ್ಳೆ ರೀತಿ ಉಡುಗೆ ತೊಟ್ಟುಕೊಳ್ಳುವಂತೆ ನಿನ್ನ ಪತ್ನಿಗೆ ಹೇಳು. ಇಲ್ಲದಿದ್ದರೆ ನಾನು ಆಕೆಯ ಮುಖಕ್ಕೆ ಆಯಸಿಡ್​ ಹಾಕುತ್ತೇನೆ’ ಎಂದು ಸಾಮಾಜಿಕ ಜಾಲತಾಣ ಇನ್​​ಸ್ಟಾಗ್ರಾಮ್​ ಮೂಲಕ ಪತ್ರಕರ್ತ ಶಹಭಾಜ್​ ಅನ್ಸರ್​ ಅವರ ಪತ್ನಿಗೆ ಬೆದರಿಕೆ ​ ಹಾಕಿದ್ದಾನೆ.

ಟ್ವಿಟರ್​​ ಪೋಸ್ಟ್​​

ಈ ​ವಿಚಾರವಾಗಿ ನಿಕಿತ್​ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪನಿ ಪ್ರತಿಕ್ರಿಯಿಸಿದ್ದು, ‘ನಮ್ಮ ಉದ್ಯೋಗಿ ನಿಕಿತ್​ ಶೆಟ್ಟಿ ಹಾಕಿರುವ ಪೋಸ್ಟ್​​ಅನ್ನು ನಾವೂ ವಿರೋಧಿಸುತ್ತೇವೆ. ಮತ್ತೊಬ್ಬರ ಉಡುಗೆ ಬಗ್ಗೆ ಮಾತನಾಡುವುದು ತಪ್ಪು. ಕಂಪನಿ ಯಾವಾಗಲೂ ಭದ್ರತೆ ಮತ್ತು ಶಾಂತಿಯುತ ವಾತಾವರಣ ಸೃಷ್ಟಿಸಲು ಇಷ್ಟಪಡುತ್ತದೆ.

ಹೀಗಾಗಿ, ನಿಕಿತ್​ ಶೇಟ್ಟಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದು, ಅವರನ್ನು ಐದು ವರ್ಷ ಕೆಲಸದಿಂದ ವಜಾ ಮಾಡಿದ್ದೇವೆ. ಅಲ್ಲದೇ ನಿಕಿತ್ ಶೇಟ್ಟಿ ವಿರುದ್ಧ ದೂರು ದಾಖಲಿಸಿದ್ದೇವೆ​ ಎಂದು ಹೇಳಿದೆ.

ಇದಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್​ ಬಳಕೆದಾರರು ಕಂಪನಿಗೆ ಧನ್ಯವಾದ ಹೇಳಿದ್ದಾರೆ. ಮತ್ತು ಅನ್ಸಾರ್​ ಅವರು ಕೂಡ ಕಂಪನಿಗೆ ಧನ್ಯವಾದ ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!