ಕಲಬುರಗಿ:- ಅಫಜಲಪುರ ತಾಲೂಕಿನಲ್ಲಿ 61 ಕಾಮಗಾರಿಗಳು ಮಾಡದೆ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಾನೂನಿನ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡು ನುಂಗಿ ಹಾಕಿರುವ ಭ್ರಷ್ಟ ಅಧಿಕಾರಿಗಳಿಂದ ಮರಳಿ ಪಡೆದು ಸ್ಥಳಿಯ ಜನರಿಗೆ ಸರ್ಕಾರದ ಸವಲತ್ತುಗಳನ್ನು ದೊರಕುವಂತೆ ಮಾಡಬೇಕು ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ಪರವಾನಿಗೆ ರದ್ದು ಮಾಡಬೇಕು ಮತ್ತು ಅವರಿಂದ ಸರ್ಕಾರದ ಅನುದಾನ ಮರಳಿ ವಸೂಲಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಿನಾಂಕ ೧೫/೧೦/೨೦೨೪ ರಂದು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ ಕೊರಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ನಾಮದರ, ಕಾರ್ಯದರ್ಶಿ ಆಸಿಫ್ ರುದ್ರವಾಡಿ, ಜಿಲ್ಲಾ ಪದಾಧಿಕಾರಿ ಸಂದೀಪ ಭೀಮಳ್ಳಿ, ರಾಹುಲ, ನಾಗರಾಜ ಕೋಗನೂರ, ಅಫ್ಜಲಪೂರ ತಾಲೂಕು ಅಧ್ಯಕ್ಷರಾದ ಸದಾನಂದ ಕ್ಷತ್ರಿ, ಜೇವರ್ಗಿ ತಾಲೂಕು ಅಧ್ಯಕ್ಷರಾದ ಸತೀಶ ಜಾಗಿರದಾರ, ಮತ್ತು ವಿಕ್ರಮ, ಚಿಂಚೋಳಿ ತಾಲ್ಲೂಕು ಅಧ್ಯಕ್ಷರಾದ ರಮೇಶ, ಯಡ್ರಾಮೀ ತಾಲೂಕು ಅಧ್ಯಕ್ಷರಾದ ಜಗದೀಶ, ಅಫ್ಜಲಪೂರ ತಾಲೂಕು ಉಪಾಧ್ಯಕ್ಷರಾದ ಮುತ್ತು ಕುರಿಮನಿ, ಹಾಗೂ ಶರಣು ದೇವನಾಜಿ, ಸಚಿನ, ಆಕಾಶ ಕೊತಲಿ, ಲಿಂಗರಾಜ ಸ್ವಾಮಿ, ನೀಲಕಂಠ ಸೇರಿಕಾರ ಹಾಗೂ ಅನೇಕ ಜಯ ಕರ್ನಾಟಕ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.




