Ad imageAd image

ಭರತ್ ಬೊಮ್ಮಾಯಿ ಪರ ಬ್ಯಾಟ ಬಿಸಿದ ಬೆಲ್ಲದ

Bharath Vaibhav
ಭರತ್ ಬೊಮ್ಮಾಯಿ ಪರ ಬ್ಯಾಟ ಬಿಸಿದ ಬೆಲ್ಲದ
WhatsApp Group Join Now
Telegram Group Join Now

ಹುಬ್ಬಳ್ಳಿ: -ಶಿಗ್ಗಾಂವಿ ಬೈ ಎಲೆಕ್ಷನ್ ದಲ್ಲಿ ಭರತ್ ಬೊಮ್ಮಾಯಿಗೆ ಕೊಡಬೇಕೆಂದು ಹೇಳುವ ಮೂಲಕ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಬಸವರಾಜ್ ಬೊಮ್ಮಾಯಿ ಪರ ಬ್ಯಾಟ್ ಬೀಸಿದ್ದಾರೆ.ಇದರೊಂದಿಗೆ ಬೆಲ್ಲದ ಹಾವೇರಿ ಜಿಲ್ಲಾ ರಾಜಕಾರಣಕ್ಕೂ ಕಾಲಿಟ್ಟಂತಾಗಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಪರವಾಗಿ ಜನರ ಅಭಿಪ್ರಾಯ ಉತ್ತಮವಾಗಿದೆ ಎಂಬುದು,ಸ್ಥಳೀಯವಾಗಿ ಸಂಚರಿಸಿದಾಗ ಕಂಡು ಬಂದಿದೆ.
ಅವರೇ ಅಭ್ಯರ್ಥಿಯಾದರೆ ಸುಲಭ ಗೆಲವು‌ ಸಾಧಿಸಬಹುದು ಎಂದು ಜನರು ಹೇಳುತ್ತಿದ್ದಾರೆ.ಈ ನಿಟ್ಟಿನಲ್ಲಿ ಹೈಕಮಾಂಡ್ ಯಾರ ಹೆಸರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತದೆ ಅದಕ್ಕೆ ಬಸವರಾಜ ಬೊಮ್ಮಾಯಿ ಆದಿಯಾಗಿ ಎಲ್ಲರೂ ಬದ್ದರಾಗಬೇಕೆಂದು ತಿಳಿಸಿದರು.

ರಾಜ್ಯದಲ್ಲಿ ಮೂರು ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಹೀಗಾಗಿ ಉಪಚುನಾವಣೆ ಚರ್ಚೆ ಜೋರಾಗಿದೆ. ಈ ನಡುವೆ ಯಾರು ಅಭ್ಯರ್ಥಿ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈಗಾಗಲೇ 60 ಕ್ಕೂ ಹೆಚ್ಚು ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡತ್ತಾರೆ ಕಾದುನೋಡಬೇಕು ಎಂದರು.

ಕುಟುಂಬ ರಾಜಕಾರಣ ವಿರೋಧಿಸುವ ಬಿಜೆಪಿ, ಸಂಸದರ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಾಯದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ಚುನಾವಣೆಯಲ್ಲಿ ಗೆಲುವೊಂದೇ ಮುಖ್ಯ. ಇದಲ್ಲದೆ ಜನರ ಅಭಿಪ್ರಾವೂ ಮುಖ್ಯ ವಾಗುತ್ತದೆ. ಇದಲ್ಲದೇ ಸ್ವತಃ ಬಸವರಾಜ ಬೊಮ್ಮಾಯಿ ಅವರು ತಮ್ಮ ಮಗ ಅಭ್ಯರ್ಥಿ ಅಲ್ಲ ಎಂದು ಹೇಳಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ಎಲ್ಲರೂ ಬದ್ದವಾಗಬೇಕು ಎಂದು ತಿಳಿಸಿದರು.
ಶಿಗ್ಗಾವಿ ಬೈ ಎಲಕ್ಷನ್ ಗೆ ರಾಜ್ಯ ಕೋರ್ ಕಮಿಟಿ ಮೂವರ ಹೆಸರು ಕಳಿಸಿದೆ ಎಂದ ಬೆಲ್ಲದ, ಶ್ರೀಕಾಂತ್ ದುಂಡಿಗೌಡ್ರ, ಶಶಿ ಯಲಿಗಾರ ಹಾಗೂ ಶಿಗ್ಗಾವಿ ತಾಲೂಕು ಬಿಜೆಪಿ ಅಧ್ಯಕ್ಷ ಮ್ಯಾಗೇರಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂದರು.

ಮಾಜಿ ಸಚಿವ ಮುರುಗೇಶ ನಿರಾಣಿ ಶಿಗ್ಗಾಂವಿ ಅಭ್ಯರ್ಥಿ‌ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು,
ನಿರಾಣಿ ಅವರು ಉಪಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ಆಸಕ್ತಿ ಹೊಂದಿಲ್ಲ. ಈಗಾಗಲೇ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಯೋಗಿ ಇರಲಿ,ಚನ್ನಪಟ್ಟಣದ ಉಪಚುನಾವಣೆಗೆ ಸಿ.ಪಿ.ಯೋಗೇಶ್ವರ ಎನ್’ಡಿಎ ಅಭ್ಯರ್ಥಿಯಾಗಲಿ ಎಂಬುದು ಪಕ್ಷದ ನಿಲುವು. ಅವರಿಗೆ ಸಹಕರಿಸುವಂತೆ ಎಚ್‌ಡಿ ಕೆ ಅವರನ್ನು ಮನವೊಲಿಸಲು ಪ್ರಯತ್ನ ಮಾಡುತ್ತೇವೆ. ಅವರ ನಿರ್ಧಾರ ವೂ ಮುಖ್ಯವಾಗುತ್ತದೆ ಎಂದು ತಿಳಿಸಿದರು.

೨೫ ರಂದು ಪ್ರತಿಭಟನೆ ,ಹಳೇಹುಬ್ಬಳ್ಳಿ ಗಲಭೆ ಪ್ರಕರಣ‌ವಾಪಸ್ ಪಡೆದ ಸರಕಾರದ ಕ್ರಮ ಖಂಡಿಸಿ ಇದೇ ೨೫ ರಂದು ರಾಜ್ಯದ ಪ್ರಮುಖರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಅಂದಾಜು ೨೫ ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಜೋಶಿ ಬ್ರದರ್ ಪಕ್ಷಕ್ಕೂ ಸಂಬಂಧವಿಲ್ಲ,ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಮತ್ತು ಅವರ ಬ್ರದರ್ ಗೋಪಾಲ ಜೋಶಿ ಮಧ್ಯೆ ಸಂಬಂಧ ಸರಿಯಿಲ್ಲ. ಗೋಪಾಲ ಜೋಶಿ ಬಿಜೆಪಿ ಪಕ್ಷಕ್ಕೆ ಸಂಬಂಧವಿಲ್ಲ ಎಂದು ಹೇಳಿದ ಅರವಿಂದ ಬೆಲ್ಲದ, ಗೋಪಾಲ ಜೋಶಿ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದರು.

 ವರದಿ:- ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!