ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ರೈತರಿಗೆ ನಕಲಿ ಗೊಬ್ಬರ ಮಾರಾಟ ಬಟಾಬಯಲು
ಮಸ್ಕಿ ತಾಲೂಕಿನ ಹಾಲಾಪುರ ಹೋಬಳಿಯ ಮಲ್ಲದಗುಡ್ಡ ಕ್ಯಾಂಪ್ ನಲ್ಲಿ ನಡೆದಿದೆ ರೈತರಿಗೆ ಮೋಸ
ಶ್ರೀನಿವಾಸ ಆಗ್ರೋ ಟ್ರೇಡರ್ಸ್ ನಲ್ಲಿ ನಡೆಯುತ್ತೆ ನಕಲಿ ಗೊಬ್ಬರ ಮಾರಾಟ ದಂಧೆ
ಬಿ.ವಾಸು ರೈತರಿಗೆ ಮೋಸ ಮಾಡಿದ ವ್ಯಕ್ತಿ
ನಕಲಿ ಗೊಬ್ಬರ ವರದಿ ಬಂದರು ಕೃಷಿ ಅಧಿಕಾರಿ ಗುರುನಾಥ ಕಣ್ಣಿದ್ದು ಕುರುಡು
ನಕಲಿ ಗೊಬ್ಬರ ಮಾರಾಟ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಸರಕಾರ ಹೇಳಿದರೆ,ಸರಕಾರವೇ ಮಸ್ಕಿ ತಾಲೂಕಿನ ಹಾಲಾಪುರ ಹೋಬಳಿಯ ಮಲ್ಲದಗುಡ್ಡ ಕ್ಯಾಂಪ್ ನಲ್ಲಿರುವ ಶ್ರೀನಿವಾಸ ಆಗ್ರೋ ಟ್ರೇಡಸ್೯ ಮಾಲಕ ಬಿ.ವಾಸು ನಕಲಿ ಗೊಬ್ಬರ ನೀಡಿರುವುದು ಸತ್ಯವಾಗಿದ್ದರು ಕೃಷಿ ಅಧಿಕಾರಿ ಗುರುನಾಥ ಕ್ರಮ ಜರುಗಿಸದೆ ಮೌನ ತಾಳಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಾಯಕ ರೈತರಿಗೆ ಮೋಸ ಮಾಡಿದರು ಸಹ ನಮ್ಮನ್ನು ಯಾರು ಕೇಳುತ್ತಾರೆಂದು ಬಿ.ವಾಸು ಎಂಬ ವ್ಯಕ್ತಿ ನಕಲಿ ಗೊಬ್ಬರ ನೀಡಿರುವ ಅಂಶ ಸತ್ಯವಾಗಿದ್ದರು ಕೃಷಿ ಅಧಿಕಾರಿ ಗುರುನಾಥ ಮಾಲಕನ ಜೊತೆ ಶಾಮೀಲಾಗಿ ಪ್ರಕರಣ ದಾಖಲಿಸದೆ ರೈತರಿಗೆ ಮೋಸ ಮಾಡುತ್ತಿದ್ದಾರೆಂದು ರೈತರು ನ್ಯಾಯಬೇಕು ಎಂದು ಒತ್ತಾಯಿಸಿದ್ದಾರೆ.
ಬಡ ರೈತರ ಬೆನ್ನೆಲುಬನ್ನು ಬಿ.ವಾಸು ಎಂಬಾತ ನಕಲಿ ಗೊಬ್ಬರ ನೀಡಿ ರೈತರನ್ನು ಸಾಯಿಸುವ ಕೆಲಸ ಮಾಡುತ್ತಿದ್ದರು ಸರಕಾರದ ಅಧಿಕಾರಿಗಳು ಬಡ ರೈತರ ಗೋಣು ಮುಣಿಯುತ್ತಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ಅಮಾಯಕ ರೈತರ ಕಷ್ಟ ಕೇಳಿಯಾದರು ನ್ಯಾಯ ಕೊಡುವ ಮಾಡಿ ಸ್ವಾಮಿ.
ವರದಿ : ಶಿವ ತೇಜ