ಸಂಕೇಶ್ವರ : ಶ್ರೀ ದುರದುಂಡಿಶ್ವರ ವಿದ್ಯಾ ಸಂವರ್ಧಕ ಸಂಘ ಸಂಕೇಶ್ವರ ಇವರ ಸಂಯುಕ್ತಶ್ರಯದಲ್ಲಿ ಸ್ವಾತಂತ್ರ ಸೇನಾನಿ ಸಹಕಾರ ಮಹರ್ಷಿ ಶಿಕ್ಷಣ ಶಿಲ್ಪಿ ದಿವಂಗತ ಅಪ್ಪನಗೌಡಾ ಪಾಟೀಲ ಅವರ 50 ನೆ ಪುಣ್ಯ ಸ್ಮರಣೆ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ಅತಿ ಅರ್ಥಪೂರ್ಣವಾಗಿ ನಡೆಯಿತು.
ಪ್ರಾರಂಭದಲ್ಲಿ ಅಪ್ಪನಗೌಡರ ಪುತಳಿಗೆ ಪೂಜೆ ಸಲ್ಲಿಸಿ ಹೂ ಮಾಲೆ ಸಮರ್ಪಣೆ ಮಾಡಿ ರೈತ ಗೀತೆಗೆ ವಿದ್ಯಾರ್ಥಿನಿಯರಿಂದ ನೃತ್ಯ ಮಾಡಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನೂ ಕಾರ್ಯಕ್ರಮದ ವೇದಿಕೆ ಮೇಲೆ ದಿವ್ಯ ಸಾನಿಧ್ಯ ನೀಡಸೋಷಿ ಮಠದ ಶಿವಲಿಂಗೇಶ್ವರ ಸ್ವಾಮೀಜಿ ನಿಜಲಿಂಗೇಶ್ವರ ಸ್ವಾಮೀಜಿ ವಹಿಸಿದ್ದರು.
ಈ ವೇಳೆ ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷರಾದ ಎ.ಬಿ ಪಾಟೀಲ ಕೆ. ಬಿ. ಗುಡಸಿ.ವಿಶ್ರಾಂತ ಕುಲಪತಿಗಳು ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ. ಶಶಿಕಾಂತ ನಾಯಿಕ, ಗಜಾನನ ಮಣ್ಣಿಕೇರಿ ಅವರಿಗೆ ಸಂಸ್ಥೆಯ ವತಿಯಿಂದ ವಿಶೇಷ ಸತ್ಕಾರ ಮಾಡಲಾಯಿತು. ಅದಾದ ಬಳಿಕ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮತ್ತು ಪ್ರಾಧ್ಯಪಕರ ಸೇವಾನಿವೃತ್ತ ಸಿಬ್ಬಂದಿಯ ಸತ್ಕಾರ ಮಾಡಲಾಯಿತು. ಇನ್ನೂ ಕಾರ್ಯಕ್ರಮವನ್ನ ಉದ್ದೇಶಿಸಿ ಕೆ.ಬಿ. ಗುಡಸಿ, ಸಂಸ್ಥೆಯ ಅಧ್ಯಕ್ಷರಾದ ಎ.ಬಿ ಪಾಟೀಲ, ಶಿವಲಿಂಗೇಶ್ವರ ಸ್ವಾಮಿಗಳು ಮತ್ತು ಗಜಾನನ ಮಣ್ಣಿಕೇರಿ ಮಾತನಾಡಿದರು.
ಈ ವೇಳೆ ಸಂಸ್ಥೆಯ ನಿರ್ದೇಶಕರು ವೆವಸ್ಥಾಪಕ ಸಮಿತಿಯ ಸದಸ್ಯರು ಅಂಗ ಸಂಸ್ಥೆಯ ಮುಖ್ಯಸ್ಥರು ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ