ಮುದಗಲ್ಲ : ಕಲ್ಯಾಣ ಕನಾ೯ಟಕ ದವೇ೯ಸಿ ಅಲೆಮಾರಿ ಅರೇ ಅಲೆಮಾರಿ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ನೂತನ ಪ್ರಧಾನ ಕಛೇರಿ ಆರಂಭ ಚಚ೯ನ ಪಕ್ಕದಲ್ಲಿ ಆರಂಭ ಮಾಡಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾದ ರಹೀಮ್ ಶಾ ಅವರು ಸಮುದಾಯದ ಸಂಘಟನೆ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು ಹೇಳಿದರು.
ಅವರು ಮುದಗಲ ಪಟ್ಟಣದಲ್ಲಿ ಸಂಘದ ನೂತನ ಕಚೇರಿಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ದೇವೇ೯ಸಿ ಅಲೆಮಾರಿ ಅರೇ ಅಲೆಮಾರಿ ಜನಾಂಗದ ಸಮುದಾಯದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುವುದರೊಂದಿಗೆ ಎಲ್ಲಾ ಭಾಗಗಳಲ್ಲಿರುವ ಸಮಾಜದ ಜನರನ್ನು ಸಂಘದ ಸದಸ್ಯರುಗಳನ್ನಾಗಿ ಮಾಡಿಸುವ ಕೆಲಸವನ್ನು ಮಾಡಲಾಗುವುದು.
ಆ ಮೂಲಕ ಮುದಗಲ್ಲ ಹಾಗೂ ತಾಲೂಕಿನಲ್ಲಿ ದವೇ೯ಸಿ ಅಲೆಮಾರಿ ಅರೇ ಅಲೆಮಾರಿ ಜನಾಂಗದ ಬಲಿಷ್ಠವಾಗಿ ಕಟ್ಟುವ ಕೆಲಸವನ್ನು ಸಂಘದ ಎಲ್ಲಾ ಪದಾಧಿಕಾರಿಗಳು, ಆಡಳಿತ ಮಂಡಳಿಯವರು ಹಾಗೂ ಸಮುದಾಯದ ಮುಖಂಡರುಗಳ ಸಹಕಾರದೊಂದಿಗೆ ಮಾಡಲಾಗುವುದು. ಸಂಘಟನೆ ಮಾಡುವಂತಹ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸರ್ವರೂ ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು..
ಈ ಸಂದರ್ಭದಲ್ಲಿ ಮೊಹದೀನ್ ಬಂಡಾರಿ, ತುಕಾರಾಮ,ಇಂಗಳೇ, ಮೀರಾ ಹುಸೇನ್, ಪೀರಾ ಶಾ, ದಾದಾ ಪೀರ್, ಮೈಬುಬೂ ಪಾಶ , ರಾಜಪ್ಪ ಬೈಲ್ ಪತ್ತಾರ, ಇತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ




