ವಿಜಯನಗರ: ತುಂಬಿದ ಕೊಡ ತುಳುಕೀತಲೇ ಪರಾಕ್ ಎಂಬುದಾಗಿ ಶ್ರೀ ಮೈಲಾರ ಲಿಂಗೇಶ್ವರದಲ್ಲಿ ವರ್ಷದ ಭವಿಷ್ಯವೆಂದೇ ಹೇಳಲಾಗುವಂತ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ.
ವಿಜಯನಗರದ ಹೂವಿನಹಡಗಲಿಯಲ್ಲಿನ ಶ್ರೀ ಮೈಲಾರ ಲಿಂಗೇಶ್ವರದ ಜಾತ್ರೆಯ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಕಾರ್ಣಿಕ ನುಡಿಯನ್ನು ರಾಮಣ್ಣ ಗೊರವಯ್ಯ ನುಡಿದಿದ್ದಾರೆ.ತುಂಬಿದ ಕೊಡ ತುಳುಕೀತಲೇ ಪರಾಕ್ ಎಂಬುದು ಈ ವರ್ಷದ ಕಾರ್ಣಿಕ ನುಡಿಯಾಗಿದೆ.
ರಾಮಣ್ಣ ಗೊರವಯ್ಯ ನುಡಿದಂತ ತುಂಬಿದ ಕೊಡ ತುಳುಕೀತಲೇ ಪರಾಕ್ ಕಾರ್ಣಿಕ ನುಡಿಯನ್ನು ವೆಂಕಪ್ಪಯ್ಯ ಒಡೆಯರು ವಿಶ್ಲೇಷಣೆ ಮಾಡಿದ್ದು, ಈ ವರ್ಷ ರಾಜ್ಯ, ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ. ರೈತರಿಗೆ ಕೈತುಂಬ ಬೆಳೆ ಬರುವುದಾಗಿ ಅರ್ಥ ಎಂಬುದಾಗಿ ತಿಳಿಸಿದ್ದಾರೆ.



