Ad imageAd image

ಜಾತ್ರೆಯ ವಿಶೇಷ: ಮುಳ್ಳಿನ ಪೊದೆಗೆ ಹಾರಿದ ಭಕ್ತಾದಿಗಳು

Bharath Vaibhav
ಜಾತ್ರೆಯ ವಿಶೇಷ: ಮುಳ್ಳಿನ ಪೊದೆಗೆ ಹಾರಿದ ಭಕ್ತಾದಿಗಳು
WhatsApp Group Join Now
Telegram Group Join Now

ಚಾಮರಾಜನಗರ ತಾಲೂಕಿನ ಗೂಳಿಪುರ ಎಂಬ ಊರಲ್ಲಿ ಪ್ರತಿ ವರ್ಷ ನಡೆಯುವ ಮಾರಮ್ಮನ ಹಬ್ಬದಂದು ನಾಯಕ ಸಮುದಾಯದ ಜನರು ಮುಳ್ಳಿನ ಪೊದೆಗಳಿಗೆ ಹಾರಿ ಭಕ್ತಿ ಮೆರೆಯುತ್ತಾರೆ. ಗ್ರಾಮದ ಬಿಸಿಲು ಮಾರಮ್ಮ, ಉರುಕಾತಮ್ಮ,ಕುಣಗಹಳ್ಳಿ ಮಾರಮ್ಮ,ಕುಂಟು ಮಾರಮ್ಮ ಹಾಗೂ ಗ್ರಾಮ ದೇವತೆಗಳ ಜಾತ್ರೆಯಲ್ಲಿ ರಾಶಿ-ರಾಶಿ ಇರುವ ಮುಳ್ಳಿನ ಪೊದೆಗಳಿಗೆ ಭಕ್ತರು ಹಾರಿ ಭಕ್ತಿಯ ಪರಾಕಷ್ಠೆ ಮೆರೆಯುತ್ತಾರೆ.ಬಿಸಿಲು ಮಾರಮ್ಮ ಆವಾಹನೆ ಆಗುವ ತನಕ ಗ್ರಾಮದ ಹಲವರು ದೇವರ ಪ್ರತಿನಿಧಿಗಳು ಓಡಿ ಮುಳ್ಳಿನ ಪೊದೆಗಳಿಗೆ ಹಾರುತ್ತಾರೆ. ಡೊಳ್ಳಿನ ಸದ್ದು- ದೇವರ ನಾಮ ಸ್ಮರಣೆಯ ಜೊತೆಗೂಡಿ ಮುಳ್ಳಿನ ಪೊದೆಗಳಿಗೆ ಹಾರುವ ಮೈನವಿರೇಳಿಸುವ ಸನ್ನಿವೇಶವನ್ನು ಸಾವಿರಾರು ಮಂದಿ ಸೋಮವಾರ ಸಂಜೆ ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಭಕ್ತರಾದ ರಾಮು, ಮಹೇಶ್ ನಾಯಕ, ಸತ್ಯಮೂರ್ತಿ ರವರು ಮಾತನಾಡಿದರು…
ಸುತ್ತಮುತ್ತಲಿನ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಬಿಸಿಲು ಮಾರಮ್ಮನ ಕೃಪೆಗೆ ಪಾತ್ರರಾದರು…

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!