Ad imageAd image

ಏಪ್ರೀಲ್ 8-9 ರಂದು ಅಹಮದಾಬಾದ್ ನಲ್ಲಿ ಎಐಸಿಸಿ ರಾಷ್ಟ್ರೀಯ ಸಮ್ಮೇಳನ

Bharath Vaibhav
ಏಪ್ರೀಲ್ 8-9 ರಂದು ಅಹಮದಾಬಾದ್ ನಲ್ಲಿ ಎಐಸಿಸಿ ರಾಷ್ಟ್ರೀಯ ಸಮ್ಮೇಳನ
WhatsApp Group Join Now
Telegram Group Join Now

ಅಹಮದಾಬಾದ್​ (ಗುಜರಾತ್​): ಅಖಿಲ ಭಾರತ ಕಾಂಗ್ರೆಸ್​ ಸಮಿತಿ (ಎಐಸಿಸಿ) ರಾಷ್ಟ್ರೀಯ ಸಮ್ಮೇಳನ ಇದೇ ಏಪ್ರಿಲ್​ 8- 9ರಂದು ಅಹಮದಾಬಾದ್​ನಲ್ಲಿ ಆಯೋಜನೆಗೊಂಡಿದ್ದು, 64 ವರ್ಷಗಳ ಬಳಿಕ ಗುಜರಾತ್​ನಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ವಿಶೇಷವಾಗಿದೆ.

ಇಲ್ಲಿನ ಸಬರಮತಿ ನದಿ ದಂಡೆಯ ಮೇಲೆ ನಡೆಯುವ ಪಕ್ಷದ ಉನ್ನತ ಮಟ್ಟದ ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಸುಮಾರು 3,000 ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.

ಈ ಹಿಂದೆ 1961ರಲ್ಲಿ ಗುಜರಾತ್​ನ ಭಾವನಗರದಲ್ಲಿ ಎಐಸಿಸಿ ರಾಷ್ಟ್ರೀಯ ಸಭೆ ನಡೆದಿತ್ತು. ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಇದೊಂದು ರಾಜಕೀಯ ಪುಷ್ಟಿ ನೀಡುವ ಕಾರ್ಯಕ್ರಮವಾಗಿತ್ತು.

ಈ ಬಾರಿಯ ಸಭೆಯಲ್ಲಿ ಪ್ರಮುಖ ರಾಜಕೀಯ ಚರ್ಚೆಗಳು ಮತ್ತು ಕಾರ್ಯತಂತ್ರದ ಯೋಜನೆಗಳ ಕುರಿತು ಚರ್ಚಿಸಲಾಗುವುದು. ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಈಗಾಗಲೇ ಸಕಲ ವ್ಯವಸ್ಥೆ ನಡೆಸಲಾಗಿದ್ದು, ಅಹಮದಾಬಾದ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸುಮಾರು 2,000 ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಐಟಿಸಿ ನರ್ಮದಾ ಮತ್ತು ಕೋರ್ಟ್ಯಾರ್ಡ್ ಮ್ಯಾರಿಯಟ್ ಸೇರಿದಂತೆ ಪ್ರಮುಖ ಹೋಟೆಲ್‌ಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ.

ಇದೇ ವೇಳೆ ಮತ್ತೊಂದು ಐಷಾರಾಮಿ ಹೋಟೆಲ್​ ಹಯಾತ್​, ದಿ ಫರ್ನ್​, ಫಾರ್ಚೂನ್​ ಲ್ಯಾಂಡ್​ಮಾರ್ಕ್​, ಲೆಮನ್​ ಟ್ರೀ, ರಿವೆರಾ ಮತ್ತು ರಾಡಿಸನ್​ ಬ್ಲೂಗಳು ಕೂಡ ನಿಯೋಗಕ್ಕಾಗಿ ಭರ್ತಿಯಾಗಿವೆ. ಜೊತೆಗೆ ಹೋಟೆಲ್​ನಿಂದ ಸಭೆ ನಡೆಯುವ ಸ್ಥಳಗಳಿಗೆ ಸಾರಿಗೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗ್ತಿದೆ. ಕಾರ್​ ಮತ್ತು ಬಸ್​ ಜೊತೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅನುಗುಣವಾಗಿ ಹೆಚ್ಚುವರಿ ಸೌಲಭ್ಯವನ್ನು ಮಾಡಲಾಗುತ್ತಿದೆ. ಇದರ ಎಲ್ಲಾ ಪರಿಣಾಮವಾಗಿ ಹೋಟೆಲ್​ಗಳಲ್ಲಿ ಬೇಡಿಕೆ ಹೆಚ್ಚಿದ್ದು, ದರಗಳು ಗಗನಮುಖಿಯಾಗಿವೆ.

WhatsApp Group Join Now
Telegram Group Join Now
Share This Article
error: Content is protected !!