Ad imageAd image

ವಿಜೃಂಭಣೆಯಿಂದ ನಡೆದ ಮಲಿಯಮ್ಮ ಹಾಗೂ ಶ್ರೀ ಗೌರಸಮುದ್ರ ಮಾರಮ್ಮ ದೇವಿಗಳ ಗಂಗಾ ಪೂಜೆ

Bharath Vaibhav
ವಿಜೃಂಭಣೆಯಿಂದ ನಡೆದ ಮಲಿಯಮ್ಮ ಹಾಗೂ ಶ್ರೀ ಗೌರಸಮುದ್ರ ಮಾರಮ್ಮ ದೇವಿಗಳ ಗಂಗಾ ಪೂಜೆ
WhatsApp Group Join Now
Telegram Group Join Now

ಮೊಳಕಾಲ್ಮುರು:ಪಟ್ಟಣದ ಶ್ರೀನಿವಾಸ ನಾಯಕ ಬಡಾವಣೆಯ ಹಾಗೂ ಬೇಡರ ಕಣ್ಣಪ್ಪನ ಬೀದಿಯ ನಾಯಕ ಸಮುದಾಯ ಮತ್ತು ಇತರ ಸಮುದಾಯಗಳನ್ನು ಸೇರಿ ಬುಡಕಟ್ಟು ಸಂಸ್ಕೃತಿಯಲ್ಲೇ ಒಂದಾದ ಶ್ರೀ ಮಲೆಯಮ್ಮ ಹಾಗೂ ಗೌರಸಮುದ್ರ ಮಾರಮ್ಮಗಳ ಗಂಗಾ ಪೂಜೆಯು 3 ವರ್ಷಗಳಿಗೊಮ್ಮೆ ನಡೆಯುವುದು ಶಾಂತಿ ಸಮೃದ್ಧಿ ಹಾಗೂ ಮಕ್ಕಳಿಗೆ ಯಾವುದೇ ಕೆಡುಕು ಉಂಟಾಗದೆ ಹಾಗೆ ಒಳಿತು ಮಾಡುತ್ತಾಳೆ ಎಂದು ಹೇಳುತ್ತಾರೆ ಇಲ್ಲಿನ ಪೂಜಾರಿಗಳು. ಎರಡು ದೇವರುಗಳು ಸೇರಿ ಕೂತಲಗುಂದೆ ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಅಗ್ನಿಕುಂಡವನ್ನು ತುಳಿಯುವುದು ಇಲ್ಲಿನ ಸಂಸ್ಕೃತಿಯಾಗಿದೆ.

ಈ ರೀತಿ ಮಾಡುವುದರಿಂದ ಸುಖ ಶಾಂತಿ ಸಮೃದ್ಧಿ ಸಿಗುತ್ತದೆ ಎಂದು ಹಿಂದಿನ ಕಾಲದಿಂದಲೂ ನಡೆದುಕೊಂಡ ಪದ್ಧತಿಯಾಗಿದೆ .

ಈ ಸಂದರ್ಭದಲ್ಲಿ ಮುಖಂಡರುಗಳಾದ ಗುರುರಾಜ್, ರಮೇಶ್ ದಳವಾಯಿ, ಪಟ್ಟಣ ಪಂಚಾಯತಿ ಸದಸ್ಯರಾದ ಹೊಬಣ್ಣ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್, ಪೂಜಾರಿಗಳಾದ ಈರಣ್ಣ ಮಲ್ಲಿಕಾರ್ಜುನ್ ಪ್ರಕಾಶ್ ಇನ್ನು ಹಲವರು ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ವರದಿ :ಪಿಎಂ ಗಂಗಾಧರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!