Ad imageAd image

ನನಗೂ ಮಂತ್ರಿಯಾಗುವ ಅರ್ಹತೆ ಇದೆ ಆಸೆಯೂ ಇದೆ : ವಿಜಯಾನಂದ ಕಾಶಪ್ಪನವರ್ 

Bharath Vaibhav
ನನಗೂ ಮಂತ್ರಿಯಾಗುವ ಅರ್ಹತೆ ಇದೆ ಆಸೆಯೂ ಇದೆ : ವಿಜಯಾನಂದ ಕಾಶಪ್ಪನವರ್ 
WhatsApp Group Join Now
Telegram Group Join Now

ಬೆಂಗಳೂರು : ಮುಂಬರುವ ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದ್ದು, ಬಹುದೊಡ್ಡ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ, ಇದೀಗ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ನನಗೂ ಮಂತ್ರಿಯಾಗುವ ಅರ್ಹತೆ ಇದೆ ಆಸೆಯೂ ಇದೆ ಎಂದು ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರು ಅವರು ಪ್ರತಿಕ್ರಿಯೆ ನೀಡಿದ್ದು, ಕೆ.ಎನ್ ರಾಜಣ್ಣ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಇಂತಹ ಊಹಾಪೋಹಗಳನ್ನು ಯಾರು ಶುರು ಮಾಡಿದ್ದಾರೆ ಗೊತ್ತಿಲ್ಲ.

ಇದಕ್ಕೆ ಕಡಿವಾಣ ಹಾಕುವುದಕ್ಕೆ ಆಗಲ್ಲ ಇದೆಲ್ಲದರ ಕುರಿತು ವರಿಷ್ಠರು ನಿರ್ಧರಿಸುತ್ತಾರೆ. ನನಗೂ ಮಂತ್ರಿ ಆಗಬೇಕು ಎಂಬ ಆಸೆ ಇದೆ.

ನನಗೆ ಮಂತ್ರಿ ಆಗುವ ಅವಕಾಶ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ನನಗೂ ಆಸೆ ಇದೆ ಅರ್ಹತೆ ಇದೆ ಎಂದು ಎದೆ ಬೆಳೆ ವಿಜಯಾನಂದ ಕಾಶಪ್ಪನವರ್ ತಮ್ಮ ಮಂತ್ರಿ ಆಗುವ ಕನಸು ಬಿಚ್ಚಿಟ್ಟಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!