Ad imageAd image

ದೆವ್ವ ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿತ : ಮಹಿಳೆ ಸಾವು 

Bharath Vaibhav
ದೆವ್ವ ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿತ : ಮಹಿಳೆ ಸಾವು 
WhatsApp Group Join Now
Telegram Group Join Now

ಶಿವಮೊಗ್ಗ : ಕಾಲ ಬದಲಾವಣೆ ಆದ್ರೂ ಕಾಲಘಟ್ಟ ಬದಲಾವಣೆ ಆದ್ರೂ, ಸಮಾಜದಲ್ಲಿ ಮೌಢ್ಯಗಳು ಕಡಿಮೆಯಾಗಿಲ್ಲ. ಜನರು ವೈಜ್ಞಾನಿಕವಾಗಿ ಯೋಚಿಸೋದನ್ನೇ ಬಿಟ್ಟಿದ್ದಾರೆ. ಈಗ ಜನರ ವಿಕೃತಿಗೆ ಮಹಿಳೆ ಬಲಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜಂಬರಗಟ್ಟೆ ಗ್ರಾಮದಲ್ಲಿ ದೆವ್ವ ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿತಕ್ಕೊಳಗಾಗಿದ್ದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.ಸದ್ಯ ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.

ಗೀತಮ್ಮ(53) ಮೃತ ಮಹಿಳೆ ಎಂದು ಗುರುತಿಸಲಾಗಿದೆ.ಗೀತಮ್ಮ ಮೇಲೆ ಹಲ್ಲೆ ಮಾಡಿದ ಆಶಾ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಆಶಾ ಮೈಮೇಲೆ ದೇವಿ ಬರ್ತಾಳೆ ಎಂದು ಗ್ರಾಮಸ್ಥರು ನಂಬಿದ್ದರು.ಹೀಗಾಗಿಯೇ ವಿಚಿತ್ರ ರೀತಿ ವರ್ತಿಸುತ್ತಿದ್ದ ಗೀತಮ್ಮಳನ್ನು ಅವಳ ಬಳಿ ಕರೆದೋಯ್ಯಲಾಗಿದೆ.ದೆವ್ವ ಬಿಡಿಸೋ ನೆಪದಲ್ಲಿ ಗೀತಮ್ಮಳನ್ನು ಮನಸೋಯಿಚ್ಛೆ ತಳಿಸಲಾಗಿದೆ.

ಥಳಿತಕ್ಕೊಳಗಾದ ಗೀತಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಗೀತಮ್ಮ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!