Ad imageAd image

ಅಸ್ತಿಗಾಗಿ ಹೆತ್ತಪ್ಪ, ಸಹೋದರನನ್ನೇ ಕೊಲೆ ಮಾಡಿದ ತಮ್ಮ

Bharath Vaibhav
ಅಸ್ತಿಗಾಗಿ ಹೆತ್ತಪ್ಪ, ಸಹೋದರನನ್ನೇ ಕೊಲೆ ಮಾಡಿದ ತಮ್ಮ
WhatsApp Group Join Now
Telegram Group Join Now

ಹಾಸನ : ಅಸ್ತಿಗಾಗಿ ಹೆತ್ತಪ್ಪ ಹಾಗೂ ಸಹೋದರನನ್ನೇ ಕೊಲೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಘಟನೆ ನಡೆದಿದೆ.ತಂದೆ ದೇವೇಗೌಡ (70) ಹಾಗೂ ಸಹೋದರ ಮಂಜುನಾಥ್ (50) ಕೊಲೆಯಾದವರಾಗಿದ್ದಾರೆ.

ಮೋಹನ್ (47) ಕೊಲೆಗೈದ ಆರೋಪಿ, ಮಂಜುನಾಥ್ ಹಾಗೂ ಮೋಹನ್ ಇಬ್ಬರು ಅವಿವಾಹಿತರಾಗಿದ್ದರು.ಮಂಜುನಾಥ್,ತಂದೆ-ತಾಯಿಯೊಂದಿಗೆ ವಾಸವಿದ್ದರು. ಆದರೆ ಮೋಹನ್ ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ವಾಸವಿದ್ದರು ಎನ್ನಲಾಗಿದೆ.

ಆಸ್ತಿ ಮಾರಾಟ ಮಾಡಿದ ಹಣ ನೀಡಿಲ್ಲ ಎಂದು ಮೋಹನ್ ಗಲಾಟೆ ಮಾಡಿದ್ದನು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಇಬ್ಬರನ್ನು ಕೊಲೆ ಮಾಡಿದ್ದಾನೆ. ಅದೃಷ್ಟವಶಾತ್ ತಾಯಿ ಜಯಮ್ಮ ಬಚಾವ್ ಆಗಿದ್ದಾರೆ.

ಕೊಲೆ ಮಾಡಿ ಮನೆಯಲ್ಲೇ ಮಲಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!