ಬಾಗೆಪಲ್ಲಿ: ಬಾಗೇಪಲ್ಲಿ ತಹಶೀಲ್ದಾರ್ ಕಛೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ
ಬಾಗೇಪಲ್ಲಿ ತಾಲ್ಲೂಕು ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಸುಧಾಕರ್
ರಾಜ್ಯಾಧ್ಯಕ್ಷರು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ (ರಿ) ಅವರು ಬಾಗೇಪಲ್ಲಿ ತಾಲೂಕ್ ಕಚೇರಿ ಭೇಟಿ ನೀಡಿ ಡೇಟಾ ಆಪರೇಟರ್ಗಳ ಜೊತೆ ಚರ್ಚೆ ನಡೆಸಿ ಮನವಿ ಪತ್ರವನ್ನು ನೀಡಿ ಮಾತನಾಡಿದರು.
ಬಾಗೇಪಲ್ಲಿ ತಾಲ್ಲೂಕು ಡೇಟಾ ಆಪರೇಟರ್ ಗಳಿಂದ. ದೂರು ಬಂದ ಹಿನ್ನಲೆ ನಾವು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ,ಅದೇ ರೀತಿಯಾಗಿ ಜಿಲ್ಲೆಯ ಅಸಿಸ್ಟೆಂಟ್ ಕಮಿಷನರ್ ರವರಿಗೆ ಮನವಿಯನ್ನ ನೀಡಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಗೇಪಲ್ಲಿ ತಾಲೂಕ ಕಚೇರಿಗೆ ಭೇಟಿ ನೀಡಲಾಗಿ ತಾಲೂಕ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡೇಟಾ ಆಪರೇಟರ್ ಗಳ ಜೊತೆ ಚರ್ಚಿಸಿ ಅವರ ಸಮಸ್ಯೆಗಳ ಕೇಳಿ ಇಂದು ನಾವು ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನ ನೀಡಲಾಗಿದೆ.
ತಹಶೀಲ್ದಾರ್ ಕಛೇರಿಗೆ ಪ್ರತಿ ನಿತ್ಯಾ ನೂರಾರು ಸಾರ್ವಜನಿಕರು ಬೇಟಿನೀಡುತ್ತಿದ್ದು ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ,
ಇಂತಹ ಕಛೇರಿಯಲ್ಲಿ ಕೆಲಸ ನಿರ್ವಹಿಸಲು ಒಳ್ಳೆಯ ಆಸನಗಳ ವ್ಯವಸ್ಥೆ ಇರುವುದಿಲ್ಲ,
ಮತ್ತು ನೌಕರರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯವು ಸ್ವಚ್ಚತೆಯಿಂದ ಕೋಡಿರುವುದಿಲ್ಲ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಇರುವುದಿಲ್ಲ ಮತ್ತು ನೌಕರರ ಕೆಲಸದ ಸಮಯ ಹೆಚ್ಚುಮಾಡಿದ್ದು ಯಾವುದೇ ಭದ್ರತೆ ಇಲ್ಲದೆ ಸಂಜೆ
6 ಗಂಟೆಯ ಮೇಲೆಯು ಸಹ ಮಹಿಳಾ ನೌಕರರ ಕೈನಲ್ಲಿ ಕೆಲಸವನ್ನು ಮಾಡಿಸುತ್ತಿದ್ದು
ಇದು ಕಾನೂನು ಬಾಹಿರವಾಗಿರುತ್ತದೆ.
ಈ ಎಲ್ಲಾ ಮೇಲ್ಕಂಡ ವಿಷಯಗಳ ಬಗ್ಗೆ ತಾವು ಕೂಡಲೇ ಕ್ರಮ ವಹಿಸಬೇಕೆಂದು ತಮ್ಮಲ್ಲಿ ಮನವಿ
ಮನವಿ ಪತ್ರವನ್ನು ಸಲ್ಲಿಸಿದ್ದೇವೆ.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾಗಿರುವ ಮನಿಷಾ ಪತ್ರೆ ಅವರು ಮಾತನಾಡಿ
ತಕ್ಷಣವೇ ಈ ಬಗ್ಗೆ ಸಮಸ್ಯೆಗಳ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಸ್ಪಂದಿಸುವುದಾಗಿ ತಾಲೂಕು ದಂಡಾಧಿಕಾರಿಗಳು ತಿಳಿಸಿದ್ದಾರೆ.
ಆ ವಿಚಾರವಾಗಿ ಅವರು ಸ್ಪಂದಿಸಿದಿದ್ದಲ್ಲಿ ಸರ್ಕಾರದ ಮಟ್ಟದಲ್ಲಿ ಆ ವಿಚಾರಗಳನ್ನು ಗಮನಕ್ಕೂ ತಂದು ಹೊರಗೆತ್ತಿಗೆ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನ ಬಗೆಹರಿಸುವುದಾಗಿ ರಾಜ್ಯಾಧ್ಯಕ್ಷರಾದ ಸುಧಾಕರ್ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ವಕ್ತಾರಾದ ಸುನೀಲ್ ರಾಜ್ಯ ಉಪಾಧ್ಯಕ್ಷರಾದ ಶ್ರೀ ಗಂಗಾಧರ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಂದಿನಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಶ್ ಜಿಲ್ಲಾ ಸಮಿತಿಯ ಸದ್ಯಸರಾದ ರವಿ, ರಮೇಶ್ ಇತರರು ಹಾಜರಿದ್ದರು.
ವರದಿ :ಯಾರಬ್. ಎಂ.




