Ad imageAd image

ಮೃತ್ಯುಂಜಯ ಶ್ರೀಗೆ ವಿಷಪ್ರಾಶನ ಆರೋಪ : ಬೆಲ್ಲದ ಕರೆ ಮಾಡಿ ಕ್ಷಮೆ ಕೇಳಿದ್ದಾರೆ : ಕಾಶಪ್ಪನವರ್

Bharath Vaibhav
ಮೃತ್ಯುಂಜಯ ಶ್ರೀಗೆ ವಿಷಪ್ರಾಶನ ಆರೋಪ : ಬೆಲ್ಲದ ಕರೆ ಮಾಡಿ ಕ್ಷಮೆ ಕೇಳಿದ್ದಾರೆ : ಕಾಶಪ್ಪನವರ್
WhatsApp Group Join Now
Telegram Group Join Now

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷರಾಗಿರುವ ಜಯ ಮೃತ್ಯುಂಜಯ ಶ್ರೀ ಆಹಾರದಲ್ಲಿ ವಿಷ ಹಾಕಿದ ಅನುಮಾನ ಆರೋಪದ ಕುರಿತಂತೆ ಶಾಸಕ ಬೆಲ್ಲದ್ ಆರೋಪಕ್ಕೆ ವಿಜಯಾನಂದ ಕಾಶಪ್ಪನವರು ಪ್ರತಿಕ್ರಿಯೆ ನೀಡಿದ್ದು, ಅರವಿಂದ ಬೆಲ್ಲದ್ ನನಗೆ ಈ ವಿಚಾರವಾಗಿ ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದಾರೆ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಮಾತನಾಡಿದ ಕಾಶಪ್ಪನವರ್ , ಅರವಿಂದ ಬೆಲ್ಲದ್ ನನಗೆ ಈ ವಿಚಾರವಾಗಿ ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದಾರೆ.

ಜಯ ಮೃತ್ಯುಂಜಯ ಶ್ರೀಗಳಿಗೆ ಶ್ರೀಗಳಿಗೆ ವಿಷ ಪ್ರಾಶನ ಅಂತ ತಪ್ಪು ಕಲ್ಪನೆಯಿಂದ ನಾನು ಹೇಳಿಬಿಟ್ಟೆ ಕ್ಷಮೆ ಇರಲಿ ಎಂದು ಬೆಲ್ಲದ ಹೇಳಿದರು. ಬಾಯಿಗೆ ಬಂದಂಗೆ ಮಾತನಾಡಿದರೆ ಬಗ್ಗುತ್ತಾನೆ ಅಂದುಕೊಂಡಿರಬಹುದು.

ಅರವಿಂದ್ ಬೆಲ್ಲದ ಅವರು ವಿರೋಧ ಪಕ್ಷದ ಉಪನಾಯಕ. ತನಿಖೆಗೆ ಒಂದು ಸಮಿತಿ ಮಾಡಿ ಅಂತ ಮೊನ್ನೆ ಹೇಳಿದ್ದೇನೆ.

ನನ್ನ ಕೈಯಲ್ಲಿ ಕೆಲಸ ಮಾಡುತ್ತಿದ್ದ ಜಾಫರ್ ಹಾಗೂ ಮಾಲತೇಶ್ ಇಬ್ಬರು ಹುಡುಗರನ್ನು ಮಠ ಕಾಯಲು ಹಾಕಿದ್ದೆ. ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರಲ್ಲ ಸ್ವಾಮೀಜಿಗಳು, ಅಲ್ಲಿಗೆ ಹೋಗಿ ರಿಪೋರ್ಟ್ ತೆಗೆದುಕೊಳ್ಳಲಿ ಎಂದು ಬಾಗಲಕೋಟೆಯಲ್ಲಿ ಶಾಸಕ ವಿಧಾನದ ಕಾಶಪ್ಪನವರ್ ಕಿಡಿಕಾರಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!