Ad imageAd image

ಹೆದರುವ ವ್ಯಕ್ತಿ ನಾನಲ್ಲ : ಡಿ ಕೆ ಸಿದ್ರಾಮ

Bharath Vaibhav
ಹೆದರುವ ವ್ಯಕ್ತಿ ನಾನಲ್ಲ : ಡಿ ಕೆ ಸಿದ್ರಾಮ
WhatsApp Group Join Now
Telegram Group Join Now

ಭಾಲ್ಕಿ : ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಕಾಣದ ಕೈಗಳು ಏನೇ ಅಗ್ನಿ ಪರೀಕ್ಷೆಯೊಡ್ಡಿದ್ದರೂ ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎಂದು ನಾರಂಜಾ ಸಹಕಾರ ಸಕ್ಕರೆ ಕಾರಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಹೇಳಿದರು.

ಪತ್ರಕರ್ತನಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜಿಲ್ಲಾ ಪಂಚಾಯತಿ ಸದಸ್ಯನಾಗಿ ಗಡಿ ಭಾಗದ ಸಾಯಿಗಾಂವ ಸೇತುವೆ ನಿರ್ಮಾಣಕ್ಕಾಗಿ ಹೋರಾಟ ನಡೆಸಿದರ ಪರಿಣಾಮ ಸರಕಾರ ಸೇತುವೆ ನಿರ್ಮಿಸಿದೆ.

ನಾರಂಜಾ ಸಕ್ಕರೆ ಕಾರಖಾನೆ ಅಧ್ಯಕ್ಷನಾಗಿ ಸಕ್ಕರೆ ಇಳುವರಿ ಹೆಚ್ಚಿಸುವುದರ ಜತೆಗೆ ರೈತರಿಗೆ ಸಕಾಲಕ್ಕೆ ಹಣ ಪಾವತಿಸಿದ್ದೇವೆ.

ಆದರೆ ಕಾರಖಾನೆ ಅಭಿವೃದ್ಧಿ, ನನ್ನ ಏಳಿಗೆ ಸಹಿಸದೇ ಅಧಿಕಾರ ದುರುಪಯೋಗ ಮಾಡಿಕೊಂಡು ವಿನಾಕಾರಣ ನನ್ನನ್ನು ಜೈಲು ಶಿಕ್ಷೆಗೆ ಒಳಪಡಿಸಲಾಗಿದೆ. ನಾನು ಯಾವುದೇ ಕಾರಣಕ್ಕೂ ಕುಗ್ಗುವುದಿಲ್ಲ.

ಬಂಡೆಗಲ್ಲಿನಲ್ಲಿAತೆ ಗಟ್ಟಿಯಾಗಿ ಕೊನೆಯುಸಿರುವರೆಗೂ ಜನರ ಸೇವೆಯನ್ನು ಮುಂದುವರೆಸುತ್ತೇನೆ.

ವಿಧಾನಸಭೆಯ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಸ್ವಲ್ಪದರಲ್ಲೇ ಸೋಲು ಕಂಡಿದ್ದೇನೆ. ಅಧಿಕಾರ ಶಾಶ್ವತವಲ್ಲ, ಜನರ ಸೇವೆಯೇ ನನಗೆ ಮುಖ್ಯ ಎಂದು ತಿಳಿಸಿದರು.

1999 ರ ಇತಿಹಾಸ ಪುನರ್ ನಿರ್ಮಾಣ ಎಂದು ತಮ್ಮ ನುಡಿಗಳನ್ನು ಶುರು ಮಾಡಿದ ಶಿವರಾಜ ಗಂದಗೆ ಅವರು
ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ 1999 ರ ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ ವಿಶ್ವಾಸ ವ್ಯಕ್ತ ಪಡಿಸಿದ್ದರು.

ವರದಿ:ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!