ಬೆಂಗಳೂರು: ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ನಾಳೆಯಿಂದಲೇ ಸಾರಿಗೆ ಮುಷ್ಕರವನ್ನು ಆರಂಭಿಸಲಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾಧ್ಯಂತ ಸಾರಿಗೆ ಮುಷ್ಕರ ಆರಂಭಗೊಳ್ಳಲಿದ್ದು, ರಸ್ತೆಗೆ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಇಳಿಯೋದು ಬಹುತೇಕ ಡೌಟ್ ಎನ್ನಲಾಗುತ್ತಿದೆ.
ನಾಳೆ ರಸ್ತೆಗೆ ಸಾರಿಗೆ ಬಸ್ ಇಳಿಯೋದಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾಧ್ಯಂತ ಸಾರಿಗೆ ಮುಷ್ಕರ ಆರಂಭಗೊಳ್ಳಲಿದೆ. ನೌಕರರ 38 ತಿಂಗಳ ಬಾಕಿ ಹಣಕ್ಕೆ ಈ ಮೂಲಕ ಒತ್ತಾಯಿಸಲಾಗುತ್ತಿದೆ.
ಈಗಾಗಲೇ ಆಯಾ ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸಲಾಗಿದೆ. ಜೊತೆಗೆ ಸಾರಿಗೆ ಬಸ್ ಗಳ ಕುರಿತಂತೆ ಸಹಾಯವಾಣಿಯನ್ನು ಕೂಡ ದಾವಣಗೆರೆ ಜಿಲ್ಲಾಡಳಿತ ಆರಂಭಿಸಿದೆ.




