–ಇಲಕಲ್ಲದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಭೂಮಿ ಪೂಜೆ
ಇಲಕಲ್ಲ: ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ ಪತ್ತಿನ ಸಹಕಾರ ಸಂಘ ನಿಯಮಿತದಿಂದ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯಲ್ಲಿ ನಿರ್ಮಾಣಗೊಂಡ ಸಿಸಿ ರಸ್ತೆಯ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರೂ ಆಗಿರುವ ಡಾ. ವಿಜಯಾನಂದ ಎಸ್. ಕಾಶಪ್ಪನವರ್ ಅವರು ತಮ್ಮ ಅಮೃತ ಹಸ್ತದಿಂದ ಭೂಮಿ ಪೂಜೆ ನೆರವೇರಿಸಿ, ಸಿಸಿ ರಸ್ತೆಗೆ ಉದ್ಘಾಟನೆ ನೀಡಿದರು. ಅವರು ಮಾತನಾಡುತ್ತಾ, “ಅಂಬೇಡ್ಕರ್ ಕಾಲೋನಿಯ ಅಭಿವೃದ್ಧಿಗೆ ಇನ್ನಷ್ಟು ಯೋಜನೆಗಳನ್ನು ತರುವ ನಿರ್ಧಾರವಿದೆ. ಸಮಾಜದ ಒಳಿತಿಗಾಗಿ ಈ ಭಾಗದಲ್ಲಿ ಬಲವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶರಣಪ್ಪ ಆಮದಿಹಾಳ, ಉಪಾಧ್ಯಕ್ಷರಾದ ಯುವರಾಜ್ ಚಲವಾದಿ, ನಗರಸಭೆ ಸದಸ್ಯ ಸುರೇಶ್ ಜಂಗ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜಾಕ್ ತಟ್ಗಗಾರ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಅಂಬಣ್ಣ ಚಲವಾದಿ, ರವಿ ಬೇಗಾರ, ಯಮನೂರ್ ದೊಡ್ಡಮನಿ, ಗೈಬು ಚಲವಾದಿ, ಯಮನಪ್ಪ ಬೀಳಗಿ, ಸಂಗಮೇಶ್ ಜಂಗ್ಲಿ, ದಿಲೀಪ್ ಕಲ್ಮನಿ, ಹನುಮಂತ್ ಹಿರೇಮನಿ, ಪ್ರವೀಣ್ ಹೋಳಿ, ಸಿದ್ಧಾರ್ಥ ಚಲವಾದಿ, ಮಾಳವ್ವ ಜಂಗ್ಲಿ, ಹುಲ್ಲವ್ವ ನಂದವಾಡಗಿ, ಸಂಗಮ್ಮ ರೋಣದ, ನಿರ್ಮಲ ಕಳ್ಳಿ ಇನ್ನು ಮುಂತಾದರೂ ಉಪಸ್ಥಿತರಿದ್ದರು.




