ಬೆಂಗಳೂರು : ತಂತ್ರಜ್ಞಾನ ಯುಗದಲ್ಲಿ ಭಾರತೀಯ ಸಂಸ್ಕೃತಿ ಪರಂಪರೆ ಸಂಪ್ರದಾಯ ವಿಶೇಷವಾಗಿ ಗ್ರಾಮೀಣ ಸೊಗಡು, ಹಬ್ಬ ಹರಿದಿನಗಳು ಕಲೆ ಸಾಹಿತ್ಯ ಉಡಿಗೆ ತೊಡಿಗೆಗಳು ಮರೆಮಾಚಿ ಹೋಗುತ್ತವೆ ಎಂದು ನಮ್ಮೆಲ್ಲರಿಗೆ ಕಾಡುತ್ತಿದೆ ಎಂದು ಚಿಂತಕ ವಾಗ್ಮಿ ಡಾ. ಸಂಗನ ಬಸಪ್ಪ ಬಿರಾದಾರ್ ಹೇಳಿದರು.

ಅವರು ಉತ್ತರ ಕರ್ನಾಟಕದ ಸಂಸ್ಕೃತಿ ಸಂಪ್ರದಾಯ ಕಲೆ ಸಾಹಿತ್ಯ ಕ್ರೀಡೆ ಸೇರಿದಂತೆ ವಿವಿಧ ಸಂಸ್ಕೃತಿ ಬಗ್ಗೆ ಚಿಂತನೆ ಹಾಗೂ ಹೋರಾಟಗಾರ ಹನುಮಂತಪ್ಪ ಮೇಡೆಗಾರ್ ಅವರ ನೇತೃತ್ವದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹತ್ತಿರ ಇರುವ ಕೃಷ್ಣಾ ಹೋಟೆಲ್ ಆವರಣದಲ್ಲಿ ಉತ್ತರ ಕರ್ನಾಟಕದ ಘಟಾನುಘಟಿ ಚಿಂತಕರು, ಸಮಾಜ ಸೇವಕ, ಹೋರಾಟರ ಸಭೆಯಲ್ಲಿ ಅತಿ ಶೀಘ್ರದಲ್ಲೇ ಉತ್ತರ ಕರ್ನಾಟಕ ಜಾನಪದ ಪರಿಷತ್ ಕಾರ್ಯ ಆರಂಭಿಸುತ್ತದೆ ಡಾ. ಬಿರಾದಾರ್ ಮಾತನಾಡಿದರು.

ಹುಟ್ಟು ಹೋರಾಟಗಾರ ಹನುಮಂತಪ್ಪ ಮೇಡೆಗಾರ್ ಸರ್ವರಿಗೂ ಸ್ವಾಗತಿಸಿದರು.
ಅಂಬಣ್ಣ ಮುಡಬಿ ಕಾರ್ಯ ಕ್ರಮ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಎಂ ಹೆಚ್ ಪಾಟೀಲ್, ವಿರುಪಾಕ್ಷಪ್ಪ, ಸುರೇಶ್ ದೊಡ್ಡಮನಿ, ಮಹೇಶ್, ಮಲ್ಲಿಕಾರ್ಜುನ್, ಬಸವರಾಜ್, ವೀರೇಂದ್ರ ಮಹಿಳಾ ಮುಖ್ಯಸ್ಥೆ ವೀಣಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ : ಅಯ್ಯಣ್ಣ ಮಾಸ್ಟರ್




