ಅಥಣಿ: ತಾಲೂಕಾ ಮಾದಿಗ ಸಂಘಟನೆಗಳ ಒಕ್ಕೂಟ ವತಿಯಿಂದ ಕರ್ನಾಟಕ ಸರಕಾರ ನ್ಯಾಯಮೂರ್ತಿ ನಾಗಮೋಹನ ದಾಸ ಒಳಮೀಸಲಾತಿ ವರದಿಯನ್ನು ಜಾರಿಗೆ ತರುವಲ್ಲಿ ವಿಳಂಬ ಮಾಡುತ್ತಿದ್ದು ಮಾದಿಗ ಸಮುದಾಯ ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊದಿರುವ ಹಿನ್ನಲೆಯಲ್ಲಿ ಸಾಮಾಜಿಕ,ಆರ್ಥಿಕ,ರಾಜಕೀಯ,ಹಾಗು ಶೈಕ್ಷಣಿಕವಾಗಿ ಹಿಂದುಳಿದು ತುಳಿತ್ತಕ್ಕೆ ಒಳಗಾಗಿದೆ ಸಾಮಾಜಿಕ ನ್ಯಾಯಕ್ಕಾಗಿ ಸುಮಾರು ೩ ದಶಕಗಳಿಂದ ಹೋರಾಟ ಮಾಡುತ್ತ ಬಂದಿದೆ ಹೀಗಾಗಿ ಒಳಮಿಸಲಾತಿ ಜನಸಂಖ್ಯಾ ಅನುಗುಣವಾಗಿ ತ್ವರಿತವಾಗಿ ನಾಳೆ ನಡೆಯುವ ಸಚಿವ ಸಂಪುಟದಲ್ಲಿ ಒಳಮಿಸಲಾತಿಯನ್ನು ಜಾರಿಗೆ ತರಬೇಕೆಂದು ತಮಟೆ ಚಳುವಳಿ ಮೂಲಕ ಅಥಣಿ-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ ಮಾಡಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯ ಮಂತ್ರಿಗಳಿಗೆ ಅಥಣಿ ತಹಶೀಲ್ದಾರ ಸಾಹೇಬರ ಮುಖಾಂತರ ಮನವಿ ಸಲ್ಲಿಸಲಾಯಿತು.
ಇದೆ ಸಂದರ್ಭದಲ್ಲಿ ರಾಜೇಂದ್ರ ಐಹೊಳೆ,ಸುನಿತಾ ಐಹೊಳೆ ಹನಮಂತ ಅರ್ದಾವುರ ಪ್ರಕಾಶ ಹೆಗ್ಗನ್ನವರ್ ಪ್ರಮೋದ ಹಿರೇಮನಿ ಶಂಕರ ಮುರಗುಂಡಿ ಕುಮಾರ ಗಸ್ತಿ ಪರಶು ಮುರಗುಂಡಿ ಸಂತೋಷ ಮಾದೇವಿ ಹೋಲಿಕಟ್ಟಿ,ಬಸು ಹೋಲಿಕಟ್ಟಿ ಹಾಗು ಸಮಾಜದ ಯುವಕರು ಹಿರಿಯರು ಮುಂತಾದವರು ಬಾಗವಸಿದರು.
ವರದಿ: ಸುಕುಮಾರ ಮಾದರ




