Ad imageAd image

ಶಿಗ್ಗಾಂವಿಯಲ್ಲಿ ಬಲು ನರ್ತನ ವಾಡುತ್ತಿದೆ ಮಟ್ಕಾ ದಂಧೆ

Bharath Vaibhav
ಶಿಗ್ಗಾಂವಿಯಲ್ಲಿ ಬಲು ನರ್ತನ ವಾಡುತ್ತಿದೆ ಮಟ್ಕಾ ದಂಧೆ
WhatsApp Group Join Now
Telegram Group Join Now

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನಾದ್ಯಂತ ಮಟ್ಕಾ ದಂಧೆಯ ನರ್ತನ ಬಲು ಜೋರಾಗಿದೆ.
ಇಲ್ಲಿಯ ಶಾಸಕರಾದ ಯಾಶೀರ್ ಅಹ್ಮದ್ ಖಾನ್ ಪಠಾಣ್ ರವರು ಅದಿಕಾರ ವಹಿಸಿಕೊಂಡ ಬಳಿಕ ನಮ್ಮ ಮತಕ್ಷೇತ್ರದಲ್ಲಿ ಯಾವುದೇ ಅಕ್ರಮ ದಂದೆ ನಡೆಯದ ಹಾಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದ ಮಾತು ಮರೆತು ಹೋದಂತಾಗಿದೆ.

ಶಿಗ್ಗಾಂವಿಯ ಪೊಲೀಸ್ ಅಧಿಕಾರಿಗಳಂತೂ ಇದರ ಬಗ್ಗೆ ಗಮನ ಹರಿಸಿರಲಿಲ್ಲ. ಹಾಗೆ ನಮ್ಮ ವಾಹಿನಿಯಿಂದ ಮಾಹಿತಿ ನೀಡಿದ ಕೂಡಲೇ ಅವರು ಕಾನೂನು ರೀತಿ ಕ್ರಮ ಕೈಗೊಳ್ಳುವಂತ್ತೆ ಹೇಳಿದ್ದಾರೆ .
ಶಾಸಕರು ಕೂಡ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.

ಸಾರ್ವಜನಿಕರಿಗೆ ಹಣದ ಆಮಿಷ ಒಡ್ಡುವ ಮೂಲಕ ಮಟ್ಕಾ ದಂಧೆಯಲ್ಲಿ ಹಗಲು ದರೋಡೆಗೆ ಇಳಿದಿರುವುದನ್ನು ಕಂಡರೆ ಹಾವೇರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಅಕ್ಷರಶಃ ಅನಾಥವಾಗಿದೆ.
ಶಿಗ್ಗಾಂವಿ ಹಲವು ಕಡೆ ಸುರೇಶ್ ಹಾನಗಲ್ ತಾಲೂಕಿನ ವ್ಯಕ್ತಿ ಇದಕ್ಕೆ ಕಿಂಗ್ ಪಿನ್ ಹಾಗೆ ಶಿಗ್ಗಾಂವಿ ಗ್ರಾಮದ ನಿವಾಸಿ ಶರ್ಮಾ ಈ ದಂದೆಯಲ್ಲಿ ಮೂಲ ವ್ಯಕ್ತಿಗಲಾಗಿದ್ದಾರೆ.
ಮಟ್ಕಾದಿಂದ ಮೂರಾಬಟ್ಟೆಯಾದ ಜನರ ಜೀವನಕ್ಕೆ ಶಿಗ್ಗಾಂವಿ ಪೊಲೀಸ್ ಇಲಾಖೆಯು ಕೂಡ ಒಂದು ರೀತಿಯಲ್ಲಿ ಕಾರಣೀಭೂತವಾಗಿದೆ.

ಇನ್ನಾದರೂ ಶಿಗ್ಗಾಂವಿ ಸವಣೂರು ಮತ ಕ್ಷೇತ್ರದ ಶಾಸಕರಾದ ಯಾಶಿರ್ ಅಹ್ಮದ್ ಖಾನ್ ಪಠಾಣ್ ರವರು ಅಧಿಕಾರಿಗಳಿಗೆ ಈ ಅಕ್ರಮ ದಂದೆಯ ಬಗ್ಗೆ ಗಮನ ಹರಿಸುವಂತೆ ಈ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳವಂತ್ತೆ ಸೂಚಿಸುತ್ತಾರೋ ಇಲ್ಲವೋ ನೋಡಬೇಕಿದೆ.

ವರದಿ: ನಿತೀಶಗೌಡ ತಡಸ್ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!