Ad imageAd image

LBA ಅಧಾರಿತ ಪ್ರಶ್ನೆ ಕೋಠಿಪಾಠ ಆಧಾರಿತ ಪ್ರಶ್ನೆ ಕೋಠಿ ವಿತರಣಾ ಸಮಾರಂಭ

Bharath Vaibhav
LBA ಅಧಾರಿತ ಪ್ರಶ್ನೆ ಕೋಠಿಪಾಠ ಆಧಾರಿತ ಪ್ರಶ್ನೆ ಕೋಠಿ ವಿತರಣಾ ಸಮಾರಂಭ
WhatsApp Group Join Now
Telegram Group Join Now

ಧಾರವಾಡ : ಕಲಘಟಗಿ ತಾಲೂಕಿನ ಸರಕಾರಿ ಪ್ರೌಢ ಶಾಲೆ, ಹಿರೆಹೊನ್ನಿಹಳ್ಳಿಯಲ್ಲಿ ಇಂದು ದಿನಾಂಕ 25-8-2025 ರಂದು ಉತ್ತರ ಕರ್ನಾಟಕ ನಿವೃತ್ತ ಅರಣ್ಯಾಧಿಕಾರಿ ಸಂಘದ ವತಿಯಿಂದ S S L C ವಿದ್ಯಾರ್ಥಿಗಳಿಗೆ ಪಾಠ ಆಧಾರಿತ ಪ್ರಶ್ನೆ ಕೋಠಿಯನ್ನು ಉಚಿತವಾಗಿ ನೀಡಲಾಯಿತು.ಈ ಸಭೆಯಲ್ಲಿ ಉತ್ತರ ಕರ್ನಾಟಕ ನಿವೃತ್ತ ಅರಣ್ಯಾಧಿಕಾರಿ ಸಂಘದ ಶ್ರೀ ಎಸ್. ಏನ್. ಕುಲಕರ್ಣಿ ನಿವೃತ್ತ D F O ರವರು ಮಾತನಾಡಿ ಓದಿದ್ದನ್ನು ಬರೆದು ತೆಗೆದರೆ ಉತ್ತಮ ಫಲಿತಾಂಶವನ್ನು ನಿರಿಕ್ಷಿಸಬಹುದು ಎನ್ನುವ ಕಿವಿಮಾತನ್ನು ಹೇಳಿದರು.

ನಂತರ ಶ್ರೀ ಎಸ್.ಬಾಳಕ್ರಷ್ಣ ನಿವೃತ್ತ I F S ಅಧಿಕಾರಿಗಳು ಪ್ರತಿ ವರ್ಷ ತಮ್ಮ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ತಾವೂಗಳು ನಡೆಸುವ ವಿವಿಧ ಕಾರ್ಯಗಳನ್ನು ವಿವರಿಸಿದರು.ಶ್ರೀ ಅಶೋಕ ಅಲಗೂರ ಇನ್ನೂರ್ವ A S F ಅವರು ತಾವು ಕಲಘಟಗಿ ತಾಲೂಕಿನಲ್ಲಿಯ ತಮ್ಮ ಸೇವೆಯನ್ನು ನೆನೆದು ತಾವುಗಳು ತಮ್ಮ ತಾಲೂಕಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಈ ಪುಸ್ತಕಗಳನ್ನು ವಿತರಿಸುತ್ತಿರುವದಾಗಿ ತಿಳಿಸಿದರು.ಈ ಸಂಘದ ಕಾರ್ಯದರ್ಶಿಗಳಾದ ಶ್ರೀ C K ಗರವಾಡ A S F ರವರು ತಮ್ಮ ಸಂಘದ ಕಾರ್ಯವೈಕರಿಯ ಬಗ್ಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಾಯತ್ರಿದೇವಿ ಸಜ್ಜನ ಮೇಡಂ ರವರು ಈ ಪಾಠ ಆಧಾರಿತ ಪ್ರಶ್ನೆ ಕೋಠಿಯ ಸದ್ಬಲಕೆ ಮಾಡಿಕೊಂಡು ತಾಲೂಕಿನ ಫಲಿತಾಂಶವನ್ನು ಉನ್ನತ ಮಟ್ಟಕ್ಕೆ ಒಯ್ಯಬೇಕೆಂದು ತಿಳಿಸಿದರು. ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಮಹಾಂತೇಶ ನೇಮತಿ ಹಾಗೂ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!