ಸಿಂಧನೂರು: ಅ 31 ಎಂ.ಡಿ.ತಾಹೀರ್ ನಕಾಶ್ ಅ. ಹಣಗಿ ಅವರು ಸುದೀರ್ಘ 22 ವರ್ಷಗಳ ಕಾಲ ದೇಶದ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾನಾಡದ ಸಿಂಧನೂರಿಗೆ ಆಗಮಿಸಿದ ಇವರನ್ನು ಕರ್ನಾಟಕ ಮಾಜಿ ಯೋಧರ ಸಂಘ ಸಿಂಧನೂರು ಘಟಕದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಭವ್ಯ ಸ್ವಾಗತದೊಂದಿಗೆ ಡೊಳ್ಳು ವಾದ್ಯ ಭವ್ಯವಾದ ಮೆರವಣಿಗೆಯೊಂದಿಗೆ ನಿವೃತ್ತ ಯೋಧರು ಮತ್ತು ನಗರದ ಸಂಘ ಸಂಸ್ಥೆ ಗಣ್ಯ ವ್ಯಕ್ತಿಗಳಿಂದ ಸ್ವಾಗತಿಸಲಾಯಿತು.

ಮೆರವಣಿಗೆಯಲ್ಲಿ ಮಾಜಿ ಯೋಧರುಗಳಾದ ಸುರೇಶ್.ರುದ್ರೇಶ ತುಪ್ಪದ. ನಾಗರಾಜ ತುರುವಿಹಾಳ. ನರಸಿಂಹ ಕಲ್ಲೂರು. ಪರಶುರಾಮ. ನಾಗರಾಜ ಉಪ್ಪಾರ. ಹಾಲೇಶ ಬಾದರ್ಲಿ. ಕಳಕಪ್ಪ ತುರುವಿಹಾಳ. ವೀರಭದ್ರಯ್ಯ ಸ್ವಾಮಿ.ರಾಜಾ ಸಾಬ್. ಹಾಗೂ ಲಿಂಗಸೂಗೂರಿನ ಮಾಜಿ ಯೋಧರುಗಳಾದ ವಿರೂಪಾಕ್ಷಯ್ಯ ಹಿರೇಮಠ . ನೀಲಪ್ಪ ನಂದವಾಡಗಿ. ಮಲ್ಲಪ್ಪ ಕುಂಬಾರ ಗೆಜ್ಜಲಗಟ್ಟ. ಸಂಗಯ್ಯ ಹಿರೇಮಠ. ಅಮರೇಗೌಡ ಪಾಟೀಲ್. ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ. ಬಾಗಲಕೋಟೆಯ ನಮನ ಫೌಂಡೇಶನ್ ಸಂಸ್ಥಾಪಕರಾದ ಅನಗವಾಡಿ ನಬಿ ನದಾಫ್. ಸಿಂಧನೂರಿನ ಹಿರಿಯರುಗಳಾದ ವೆಂಕಟೇಶ ಬಾದರ್ಲಿ. ಸೋಮನಾಥ ಪತ್ತಾರ. ಮಲ್ಲಿಕಾರ್ಜುನರೆಡ್ಡಿ ಸಾಸಲಮರಿ.ಅಸ್ಲಾಂ ಪಾಷಾ. ಪತ್ರಕರ್ತರಾದ ವೆಂಕೋಬ ನಾಯಕ ಬೂತಲದಿನ್ನಿ ಮತ್ತು ಅನೇಕ ದೇಶಭಕ್ತರು ವಿವಿಧ ಶಾಲಾ ಕಾಲೇಜುಗಳ ಉಪನ್ಯಾಸಕರಗಳು ಮಕ್ಕಳು ಮತ್ತು ಎಂ.ಡಿ.ತಾಹೀರ್ ನಕಾಶ್ ಅ. ಹಣಗಿ ಅವರ ಅಪಾರ ಕುಟುಂಬ ವರ್ಗ ಮತ್ತು ಅನೇಕ ದೇಶಭಕ್ತರು ಉಪಸ್ಥಿತರಿದ್ದರು.




