ಅಥಣಿ: ನಾಳೆಯಿಂದ ರಾಜ್ಯಾದ್ಯಂತ ರತ್ನಾಪುರ ಭಂಡಾರ ನಿಧಿ ಕನ್ನಡ ಚಲನಚಿತ್ರ ಬಿಡುಗಡೆ ಯಾಗಲಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಆರ್ ಎಸ್ ಪಿ ಸಮೂಹ ಸಂಸ್ಥೆಯ ಅಧ್ಯಕ್ಷರು ಹಾಗೂ ರತ್ನಾಪುರ ಭಂಡಾರ ನಿಧಿ ಚಲನಚಿತ್ರದ ನಿರ್ಮಾಪಕರಾದ ರವಿ ಪೂಜಾರಿ ಅವರ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿಯ ಕುರಿತು ಮಾತನಾಡಿ, ಉತ್ತರ ಕರ್ನಾಟಕದ ಅನೇಕ ಕಲಾವಿದರು ಬೆಳೆಸುವ ನಿಟ್ಟಿನಲ್ಲಿ ನಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದೇನೆ ಅನೇಕ ವರ್ಷದ ಬೇಡಿಕೆಯಂತೆ ಇವತ್ತು ರತ್ನಾಪುರ ಭಂಡಾರ ನಿಧಿ ಚಲನಚಿತ್ರದ ನಿರ್ಮಾಪಕರಾಗಿ ಹೊರಹೊಮ್ಮಿದು ನನಗೆ ಸಂತೋಷ ತಂದಿದೆ.
ನಾಳೆ ದಿನಾಂಕ 12 ಸೆಪ್ಟಂಬರ್ 2025 ರ ಶುಕ್ರವಾರದಂದು 50 ಐವತ್ತಕ್ಕೂ ಹೆಚ್ಚು ಸಿನಿಮಾ ಟಾಕೇಜಿಗೆ ರತ್ನಾಪುರ ಭಂಡಾರ ನಿಧಿ ಚಲನಚಿತ್ರ ಬಿಡುಗಡೆಯಾಗಲಿದೆ. ಈ ಚಲನಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಯುವ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ರಾವಸಾಬ ಐಹೊಳೆ ಮಾತನಾಡಿ ನಮ್ಮೊಂದಿಗೆ ಬೆರೆತು ಇವತ್ತು ಚಲನಚಿತ್ರದ ನಿರ್ಮಾಪಕರಾಗಿ ಹೊರಹೊಮ್ಮಿದು ನನಗೆ ತುಂಬಾ ಸಂತೋಷ ತಂದಿದೆ. ರವಿ ಪೂಜಾರಿ ಅವರು ಇನ್ನಷ್ಟು ಹೊಸ ಹೊಸ ಸಿನಿಮಾ ಮಾಡಲಿ ಎಂದು ಶುಭ ಹಾರೈಸಿದರು.
ವರದಿ: ರಾಜು ವಾಘಮಾರೆ




