ಬೆಂಗಳೂರು: ಕೇಂದ್ರ ವಲಯ ಇಂದಿಲ್ಲಿ ಮುಕ್ತಾಯವಾದ ದುಲೀಪ್ ಟ್ರೋಫಿ ಕ್ರಿಕೆಟ್ ಫೈನಲ್ ನಲ್ಲಿ 6 ವಿಕೆಟ್ ಗಳಿಂದ ದಕ್ಷಿಣ ವಲಯದ ವಿರುದ್ಧ ಗೆದ್ದು 7 ನೇ ಬಾರಿಗೆ ದುಲೀಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಗೆಲ್ಲಲು 66 ರನ್ ಗಳನ್ನು ಮಾತ್ರ ಗಳಿಸಬೇಕಿದ್ದ ಕೇಂದ್ರ ವಲಯ 5 ನೇ ಹಾಗೂ ಕೊನೆಯ ದಿನವಾದ ಇಂದು 4 ವಿಕೆಟ್ ಗಳ ನಷ್ಟಕ್ಕೆ 66 ರನ್ ಗಳ ಗುರಿ ತಲುಪಿ ಪ್ರತಿಷ್ಠಿತ ಪ್ರಶಸ್ತಿಗೆ ಇರುವ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಸ್ಕೋರ್ ವಿವರ
ದಕ್ಷಿಣ ವಲಯ 149 ಹಾಗೂ 426
ಕೇಂದ್ರ ವಲಯ 511 ಹಾಗೂ 4 ವಿಕೆಟ್ ಗೆ 66
ಪಂದ್ಯ ಶ್ರೇಷ್ಠ : ಯಶ್ ರಾಥೂಡ್




