Ad imageAd image

ಮಳಖೇಡ ಗ್ರಾಮಕ್ಕೆ ಎಸಿ ಪ್ರಭುರೆಡ್ಡಿ ಬೇಟಿ

Bharath Vaibhav
ಮಳಖೇಡ ಗ್ರಾಮಕ್ಕೆ ಎಸಿ ಪ್ರಭುರೆಡ್ಡಿ ಬೇಟಿ
WhatsApp Group Join Now
Telegram Group Join Now

ಸೇಡಂ:  ಎರಡು ದಿನಗಳ ಕಾಲ ಅತಿ ಹೆಚ್ಚು ಮಳೆ ಬರುವುದರಿಂದ ಹಳ್ಳಕೊಳ್ಳಲು ಉಕ್ಕಿ ಹರಿಯುತ್ತಿದ್ದು, ನದಿ ಸಮೀಪ ಇರುವ ಗ್ರಾಮಗಳ ಜನರು ಎತ್ತರದ ಸ್ಥಳದಲ್ಲಿ ಉಳಿದುಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಜೊತೆಗೆ ಮಳಖೇಡ,ತೇಲ್ಕೂರ ಗ್ರಾಮಗಳಲ್ಲಿ ಕಾಳಜಿ ಕೇಂದ್ರದ ಮೂಲಕ ಊಟ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಹಾಯಕ ಉಪವಿಭಾಗ ಆಯುಕ್ತರಾದ ಪ್ರಭು ರೆಡ್ಡಿ ಅವರು ಹೇಳಿದರು.

ಬೆಳಿಗ್ಗೆ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಸೇರಿದಂತೆ ತಾಲೂಕ ಆಡಳಿತ ಅಧಿಕಾರಿಗಳು ಮಳಖೇಡ ಗ್ರಾಮಕ್ಕೆ ಭೇಟಿ ನೀಡಿ ಕಾಗಿನ ನದಿಯ ನೀರು ದರ್ಗಾದ ಸಮೀಪದಲ್ಲಿರುವ ಮನೆಗಳಿಗೆ ನೀರು ನುಗ್ಗಿರುವುದನ್ನು ಪರಿಶೀಲಿಸಿ ಜನರಿಗೆ ಬೇರೆ ಕಡೆ ಉಳಿದುಕೊಳ್ಳಲು ಸಲಹೆ ನೀಡಿರುವುದರಿಂದ ಕಾಳಜಿ ಕೇಂದ್ರಗಳಲ್ಲಿ ಎರಡು ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೇಯಾಂಕ ಧನುಶ್ರೀ, ಮಳಖೇಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿನೇಶ್ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಚಂದ್ರಕಾಂತ್ ಬಾವೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಪೋಲಿಸ್ ಸಿಬ್ಬಂದಿ ಸೇರಿದಂತೆ ಇನ್ನಿತರರು ಇದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!