ಸೇಡಂ : ಪಟ್ಟಣದ ತಾಲೂಕು ಆಡಳಿತ ಕಾರ್ಯಾಲಯದಲ್ಲಿ ಶೌಚಾಲಯ ಇದ್ದರು ಸಹ ವ್ಯವಸ್ಥೆ ಹದಗೆಟ್ಟಿದೆ.
ನೀರಿನ ಸಮಸ್ಯೆ, ಸ್ವಚತ್ತೆ ಇಲ್ಲದೆ ಗಬ್ಬು ನಾರುತ್ತಿದೆ.
ಹೊಸ ತಾಲೂಕು ಆಡಳಿತ ಕಚೇರಿಯಾಗಿದ್ದು ಇಂತಹ ವ್ಯವಸ್ಥೆ ಇರುವುದು ದುರದೃಷ್ಟ ಎಂದೇ ಹೇಳಬಹುದು.
ದೂರ ದೂರ ಊರುಗಳಿಂದ ಸಾರ್ವಜನಿಕರು ಬರುತ್ತಾರೆ ಶೌಚಕ್ಕೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲ ಇದರಿಂದ ಇಲ್ಲಿನ ಅಧಿಕಾರಿಗಳಿಗೂ ರೋಗಗಳು ಬರುವ ಸಾಧ್ಯತೆ ಇದೆ.
ಇಂತಹ ಪರಿಸ್ಥಿತಿ ತಾಲೂಕಡಳಿತದಲ್ಲಿ ಇರುವುದು ದುರದೃಷ್ಟ ಆಗಿರಬಹುದಾ ಅಥವಾ ಅಧಿಕಾರಿಗಳ ನಿರ್ಲಕ್ಷ್ಯ ಇರಬೇಕಾ ಎನ್ನುವುದು ಪ್ರಶ್ನೆಯಾಗಿದೆ.
ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕ ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ, ತಾಲೂಕ ಉಪಾಧ್ಯಕ್ಷರಾದ ಇಮ್ರಾನ್ ಶೇಖ್, ಮುಧೋಳ ವಲಯ ಅಧ್ಯಕ್ಷರಾದ ಕಾಶಪ್ಪ ಮೆದಕ್, ರೈತರಾದ ಮಾಣಿಕಪ್ಪ ಮೆದಕ್,
ವರದಿ : ವೆಂಕಟಪ್ಪ ಕೆ ಸುಗ್ಗಾಲ್




