
ಸೇಡಂ: ತಾಲೂಕಿನ ಶಕಲಾಸಪಲ್ಲಿ ಗ್ರಾಮದಲ್ಲಿ ಶ್ರೀ ಎಲೆ ರಾಜೋಳಿ ವರಕವಿ ಮುರಗೇಂದ್ರ ಸ್ವಾಮಿ ಯವರ ಶಿಷ್ಯರಾದ ಪವಾಡ ಪುರುಷ ಶ್ರೀ ಪ್ರಭು ನರಶೇಶ್ವರ 21 ನೇ ಆರಾಧನೆ ನಡೆಯಿತು. ಪ್ರಭು ನರಶೇಶ್ವರ ತೊಟ್ಟಿಲು ಮತ್ತು ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಸಂದರ್ಭದಲ್ಲಿ ಭಕ್ತರು ಓಂ ನಮಃ ಗುರುದೇವ ನಿಮ್ಮ ಪಾದಗಳಿಗೆ ಶರಣು ಶಿವ ಪಂಚಾಕ್ಷರಿ ಓಂ ನಮಃ ಶಿವಾಯ ಮಂತ್ರ ಭಜನೆಯ ಮೂಲಕ ಮಂದಿರ ಒಳಗಡೆ ತಲುಪಿದರು.
ಕಾರ್ಯಕ್ರಮದಲ್ಲಿ ಎಲೆ ರಾಜೋಳಿ ಶ್ರೀ ಮುರುಘೇಂದ್ರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು ಸಂದರ್ಭದಲ್ಲಿ ಗ್ರಾಮದ ಮುಖಂಡರು ಯುವಕರು ಮಾತೆಯರು ಮಕ್ಕಳು ಬೇರೆ ಊರಿನಿಂದ ಬಂದ ಭಕ್ತರು ದರುಶನ ಪಡೆದರು. ಬಂದಂತಹ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ದಿನ ಭಜನೆ ವಿವಿಧ ಕಾರ್ಯಕ್ರಮಗಳು ನಡೆದವು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




