ಯಲಹಂಕ: ಕರ್ನಾಟಕ ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ ಅವರ ಮಾರ್ಗದರ್ಶನದಲ್ಲಿ ಯಲಹಂಕ ತಾಲೂಕ ಘಟಕದ ಅಧ್ಯಕ್ಷ ಅಶೋಕ್ ಕಲಾದಗಿ ಮತ್ತು ಸರ್ವ ಪದಾಧಿಕಾರಿಗಳ ನೇತೃತ್ವದಲ್ಲಿ ಅಕ್ಟೋಬರ್ 7ರಂದು ಮಂಗಳವಾರ ಸಾಯಂಕಾಲದ 06 ಗಂಟೆಗೆ “ಮಹರ್ಷಿ ವಾಲ್ಮೀಕಿ ಜಯಂತಿ”ಯನ್ನು ಯಲಹಂಕ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಒಂದು ಅರ್ಥ ಪೂರ್ಣ ಕಾರ್ಯ ಕ್ರಮಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಯಲಹಂಕ ತಾಲೂಕ ಘಟಕದ ಅಧ್ಯಕ್ಷ ಅಶೋಕ್ ಕಲಾದಗಿ ಬಿ ವಿ ನ್ಯೂಸ್-5 ಜೊತೆಗೆ ಮಾತನಾಡಿ ತಿಳಿಸಿದ್ದಾರೆ.
ವರದಿ: ಬಾಲಾಜಿ




