Ad imageAd image

ಬೆಳಗಾವಿ ಅಧಿವೇಶನದಲ್ಲಿ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ : ಸ್ಪೀಕರ್ ಗೆ ಶಾಸಕನ ಪತ್ರ 

Bharath Vaibhav
ಬೆಳಗಾವಿ ಅಧಿವೇಶನದಲ್ಲಿ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ : ಸ್ಪೀಕರ್ ಗೆ ಶಾಸಕನ ಪತ್ರ 
WhatsApp Group Join Now
Telegram Group Join Now

ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಯಾವುದೇ ಭತ್ಯೆ ಸ್ವೀಕರಿಸುವುದಿಲ್ಲ ಎಂದು ಸ್ಪೀಕರ್‌ ಯು.ಟಿ ಖಾದರ್ ಅವರಿಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಪತ್ರ ಬರೆದಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾಸಕ ಕಂದಕೂರ್ ಅವರು ಸ್ಪೀಕರ್‌ ಖಾದರ್ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ ಅಧಿವೇಶನಕ್ಕೆ ಭಾಗವಹಿಸುವ ಸಂದರ್ಭದಲ್ಲಿ ಯಾವುದೇ ಭತ್ಯೆ, ವಸತಿ ಸೌಕರ್ಯ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಕಲಾಪದ ವೇಳೆ ನೀಡುವ ಚಹಾ, ಉಪಹಾರ, ಊಟವೂ ಮಾಡುವುದಿಲ್ಲ. ಆದರೆ ನಮಗೆ ಹೊರಗಿನಿಂದ ತರಿಸಿಕೊಂಡು ಬಳಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!