ಧಾರವಾಡ: ಕಲೆ ಮತ್ತು ಸಾಹಿತ್ಯದ ಕಂಪನ್ನು ಪಸರಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ‘ಧಾರವಾಡ ನುಡಿಸಡಗರ 2025’ ಕಾರ್ಯಕ್ರಮವು ಅತ್ಯಂತ ವೈಭವದಿಂದ ಜರುಗಿತು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕನಕ ಅಧ್ಯಯನ ಪೀಠ ಹಾಗೂ ಚೇತನ್ ಫೌಂಡೇಶನ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಈ ವೇದಿಕೆಯು ಹೊಸ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಯಿತು.
ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದವರು ಪುಟ್ಟ ಪ್ರತಿಭೆ ಕುಮಾರಿ ಸಾನ್ವಿ ಕುಂತಲ ವಡೇರ. ಕಲೆ ಮತ್ತು ಅಭಿನಯದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಸಾನ್ವಿ, ಬೇಡಕಿಹಾಳ ಎಲ್.ಇ.ಎಸ್ (L.E.S) ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯ 6ನೇಯ ತರಗತಿಯ ವಿದ್ಯಾರ್ಥಿನಿ. ಚಿಕ್ಕ ವಯಸ್ಸಿನಲ್ಲೇ ಅಭಿನಯದಲ್ಲಿ ಅಸಾಧಾರಣ ನೈಪುಣ್ಯತೆ ಹೊಂದಿರುವ ಸಾನ್ವಿ ಅವರ ಸಾಧನೆಯನ್ನು ಗುರುತಿಸಿ, ಈ ಬಾರಿಯ ಪ್ರತಿಷ್ಠಿತ ‘ಅತ್ಯುತ್ತಮ ಬಾಲ ನಟಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದು ಪುಟ್ಟ ನಟಿಯನ್ನು ಹರಸಿದರು. ಶ್ರೀ ಚಂದ್ರಶೇಖರ್ ಮಾಡಲಗೆರೆ
ಕುಮಾರಿ ಸಾನ್ವಿಯ ತಂದೆ ಕುಂತಲ ಹನುಮಂತ ನಾಯಕ್ ಉಪನ್ಯಾಸಕರಾದ ಪಾಟಿಲ್ ಹಾಗೂ ಕನಕ ಅಧ್ಯಯನ ಪೀಠ ಮತ್ತು ಚೇತನ್ ಫೌಂಡೇಶನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ನಟನೆಯಲ್ಲಿ ದೊಡ್ಡ ಸಾಧನೆ ಮಾಡುವ ಗುರಿ ಹೊಂದಿರುವ ಸಾನ್ವಿಯ ಈ ಯಶಸ್ಸು ಅವರ ಶಾಲೆಗೆ ಮತ್ತು ಪೋಷಕರಿಗೆ ಹೆಮ್ಮೆ ತಂದಿದೆ. ಇಂತಹ ವೇದಿಕೆಗಳು ಗ್ರಾಮೀಣ ಮತ್ತು ನಗರ ಭಾಗದ ಪ್ರತಿಭೆಗಳಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ.
ವರದಿ : ರಾಜು ಮುಂಡೆ




