——————————————-ಕ್ರಿಕೆಟ್: ವಿಜಯ ಹಜಾರೆ ಟ್ರೋಫಿ
ಅಹ್ಮದಾಬಾದ್: ಕರ್ನಾಟಕ ತಂಡವು ಇಲ್ಲಿ ನಡೆದಿರುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಇಂದು ಪಾಂಡಿಚೇರಿಗೆ ೩೬೪ ರನ್ ಗಳ ವಿಶಾಲ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಎಡಿಸಿಎ ರೇಲ್ವೇಸ್ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ಪರವಾಗಿ ನಾಯಕ ಮಯಾಂಕ ಅಗರವಾಲ್, ಎಡಗೈ ಆರಂಭಿಕ ಆಟಗಾರ ದೇವದತ್ತ ಪೆಡಿಕಲ್ ಆಕರ್ಷಕ ಶತಕಗಳನ್ನು ಸಿಡಿಸಿದರು.
ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಕರುಣ್ ನಯ್ಯರ ಬಿರುಸಿನ ಅರ್ಧ ಶತಕ ಚಚ್ಚಿ ಕರ್ನಾಟಕದ ವಿಶಾಲ ಮೊತ್ತಕ್ಕೆ ಕಾರಣರಾದರು.
ಸ್ಕೋರ್ ವಿವರ
ಕರ್ನಾಟಕ ೫೦ ಓವರುಗಳಲ್ಲಿ ೪ ವಿಕೆಟ್ಗೆ ೩೬೩
ಮಯಾಂಕ ಅಗರವಾಲ್ ೧೩೨ ( ೧೨೪ ಎಸೆತ, ೧೫ ಬೌಂಡರಿ, ೨ ಸಿಕ್ಸರ್)
ದೇವದತ್ತ ಪೆಡಿಕಲ್ ೧೧೩ ( ೧೧೬ ಎಸೆತ, ೧೦ ಬೌಂಡರಿ, ೪ ಸಿಕ್ಸರ್)
ಕರುಣ್ ನಯ್ಯರ ಅಜೇಯ ೬೨ ( ೩೪ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಅಭಿನವ ಮನೋಹರ ಅಜೇಯ ೨೧ ( ೬ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಪಾಂಡಿಚೇರಿ ವಿರುದ್ಧ ಕರ್ನಾಟಕದ ಬೃಹತ್ ಮೊತ್ತ




