ಕಲಬುರಗಿ:ಕಾಳಗಿ ತಾಲ್ಲೂಕಿನ.ರಟಕಲ್ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಉತ್ಸವದ ನಿಮಿತ್ಯ, ಶ್ರೀ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮ. ದೇವಿಯ ಪುರಾಣ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಉದ್ಘಾಟಿಸಿದ ಪೂಜ್ಯಶ್ರೀ ಷ, ಬ್ರ ರೇವಣಸಿದ್ಧ ಶಿವಾಚಾರ್ಯರು, ರೇವಣಸಿದ್ದೇಶ್ವರ ಹಿರೇಮಠ, ಪೂಜ್ಯಶ್ರೀ ನೀಲಕಂಠ ದೇವರು ದೊಡ್ಡ ಮಠ ರಟಕಲ್, ಎರಡನೇ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡ ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ ಮಾತನಾಡಿ. ದಾನಮ್ಮ ದೇವಿಯ ಪುರಾಣ ಕೇಳಿ ಜೀವನದಲ್ಲಿ ಒಳ್ಳೆಯ ವಿಚಾರಗಳು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವದು ತಂದೆ ತಾಯಿಯರ ಕರ್ತವ್ಯ ಐದಾರು ದಿನಗಳ ಪರ್ಯಂತರ ಈ ಕಾರ್ಯಕ್ರಮ ನಡೆಯುತ್ತದೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ವೀರಣ್ಣ ಗಂಗಾಣಿ. ಕಂದಗೂಳ,ಗ್ರಾ,ಪ,ಸದಸ್ಯರಾದ ಶರಣಮ್ಮ ಅರಣಕಲ, ಸಂಗೀತಾ ಕಿಣ್ಣಿ,ನೀಲಕಂಠ ಕೊಡದೂರ, ಪ್ರಕಾಶ ಹುಳಗೇರರಾ ಕೂಲಿ ಸಮಾಜ ಮುಖಂಡರು, ಬಸವರಾಜ ತಳವಾರ, ಹಾಗೂ ಮಲ್ಲು ಮರುಗುತ್ತಿ, ಕೂಲಿ ಸಮಾಜ ಯುವ ಮುಖಂಡರು ರಟಕಲ್, ಉಪಸ್ಥಿತಿ ಇದ್ದರೂ.
ವರದಿ :ಸುನಿಲ್




