ಕಾಗವಾಡ: ಪಟ್ಟಣದ ಶಕ್ತಿ ದೇವತೆ ಶ್ರೀ ಸಂತು ಬಾಯಿ ರಾಣು ಬಾಯಿ ದೇವರ ಜಾತ್ರಾ ಮಹೋತ್ಸವು ಬರುವ ಜನೇವರಿ28 ರಿಂದ30 ರವರೆಗೆ ಅತೀವಿಜ್ರಂಭನಣೆಯಿಂದ ನಡೆಯಲಿದೆ ಎಂದು ಪಿ ಎಸ್ ಆಯ್ ರಾಘವೇಂದ್ರ ಖೋತ ಹೇಳಿದರು.
ಅವರು ಬುಧುವಾರ ದಿ.೨೧ರಂದು ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಶ್ರೀ ಸಂತುಬಾಯಿ ರಾಣುಬಾಯಿ ದೇವರ ಜಾತ್ರಾ ಮಹೋತ್ಸವದ ಜಾಹೀರಾತು ಬಿಡುಗಡೆ ಮಾಡಿ ಮಾತನಾಡುತ್ತಾ 3 ದಿನಗಳ ವರಗೆ ನಡೆಯಲಿರುವ ಜಾತ್ರೆಯಲ್ಲಿ ಜನದಟ್ಟನೆ ಇರುವದರಿಂದ ಅಲ್ಲಲ್ಲಿ ಆಯಕಟ್ಟಿನ ಜಾಗಗಳಲ್ಲಿ ಸಿ.ಸಿ ಕ್ಯಾಮರಗಳನ್ನು ಅಳವಡಿಸಲಾಗುವದು. ಕಳ್ಳತನ ತಳ್ಳಾಟ ನೂಕಾಟ ಆಗಬಾರದೆಂದು ಪೋಲಿಸ ಇಲಾಖೆಯಿಂದ ಸಿಬ್ಬಂದಿ ನೇಮಿಸಿ ಬಂದೊಬಸ್ತ ಕೈಗೊಳಲಾಗುವುದು ಎಂದು ಹೇಳಿದರು. ಇ ಜಾತ್ರೆ ಮನರಂಜನೆ ಜಾತ್ರೆಯಾಗಿದು ಅಲಲ್ಲ ಬ್ಯಾರಿಕೇಡಗಳನ್ನು ಅಳವಡಿಸಲಾಗುವುದು ದೇವಿ ದರ್ಶನ ಕ್ಕೆ ಜನದಟ್ಟಣೆಯಾಗದಂತೆ ಭಕ್ತಾದಿಗಳಿಗೆ ಸಾಲಾಗಿ ಹೋಗುವ ವವ್ಯಸ್ಥೆ ಮಾಡಲಾಗುವುದು .ಪಟ್ಟಣದ ನಾಗರಿಕರ ಸಹಕಾರ ಅವಶ್ಯವಾಗಿದ್ದು ಅಹಿತಕರ ಘಟನೆಗಳು ನಡೆಬಾರದೆಂದು ಜಾಗರೂಕತೆ ವಹಿಸಬೆಕೆಂದು ತಿಳಿಸಿದರು.
ಪಪಂ ವತಿಯಿಂದ ಸ್ವಚ್ಚತಾ ಕಾರ್ಯ ಕೈಗೊಳ ಲಾಗುವುದುಭಕ್ತಾದಿಗಳಿಗೆಕುಡಿಯುವನೀರಿನ,ಸೌಲಭ್ಯಒದಗಿಸಲಾಗುವುದು ಎಂದರು.
ಹೆಸ್ಕಾಂಇಲಾಖೆವತಿಯಿಂದ ಶಾಖಾಧಿಕಾರಿ ಧರಿಗೌಡರ ಮಾತನಾಡಿ ವಿದ್ಯುತ್ ಕೊರತೆ ಆಗದಂತೆ ನೋಡಿ ಕೊಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗಲಾ, ಪ್ರಕಾಶ ಪಾಟೀಲ ಮಲ್ಲಿಕಾರ್ಜುನ ಕಾಂಬಳೆ, ರಮೇಶ ಕಾಂಬಳೆ, ಅವೀನಾಶ ದೇವನಿ ವಿದ್ಯಾಧರ ದೋಂಡಾರೆ, ಪ್ರಕಾಶ ಮೀರ್ಜೆ, ಉದಯ ಖೋಡೆ, ಪ್ರಕಾಶ ಧೋಂಡಾರೆ, ಸದಾಶಿವ ಕಾಂಬಳೆ,ಅರುಣ ಜೊಷಿ, ಅಣ್ಣು ಪೂಜಾರಿ, ರಾಮು ವಡ್ಡರ ವಿನೋದ ಕಾಂಬಳೆ ಸೇರಿದಂತೆ ಇತರರು ಇದ್ದರು.
ವರದಿ :ಚಂದ್ರಕಾಂತ ಕಾಂಬಳೆ




