ಸಿಂಧನೂರು : ನಗರದಲ್ಲಿ ಅಂದಾಜು 4 ಕೋಟಿ ರೂ ವೆಚ್ಚದಲ್ಲಿ ಹಸಿರು ಕ್ರಾಂತಿ ಹರಿಕಾರ ಭಾರತದ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಕಲ್ಯಾಣ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು
ನಗರದ ಪ್ರವಾಸಿ ಮಂದಿರದಲ್ಲಿರುವ ಶಾಸಕರ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರ ಜೊತೆ ಸಭೆ ಏರ್ಪಡಿಸಿ, ಸ್ಥಳ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಮಾತನಾಡಿ ನಿಮ್ಮೆಲ್ಲರ ಬಹುದಿನದ ಬೇಡಿಕೆ ಈಡೇರಿದೆ ನಗರದ ರೈಲ್ವೆ ಸ್ಟೇಷನ್ ಹತ್ತಿರ ಇರುವ ಗಯಾರಾಣ ಭೂಮಿ ಸರ್ವೆ ನಂಬರ್ 643/1* ಕ್ಷೇತ್ರ 4 ಎಕರೆ ಜಮೀನಿನ ಪೈಕಿ 1-00 ಎಕರೆ ಜಮೀನನ್ನು ಬಾಬು ಜಗಜೀವನ್ ರಾಮ್ ಕಲ್ಯಾಣ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ದಿಂದ ಅಂದಾಜು 4 ಕೋಟಿ ರೂ ವೆಚ್ಚದಲ್ಲಿ ಕಲ್ಯಾಣ ಭವನ ನಿರ್ಮಾಣ ಮಾಡಲಾಗುತ್ತದೆ ಇದಕ್ಕೆ 1-00 ಎಕರೆ ಭೂಮಿ ಮಂಜುರಾಗಿದ್ದು ಆ ಕಾಮಗಾರಿಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಬೇಕಾಗಿದೆ.

ಭವನದ ರೂಪರೇಶಗಳನ್ನು ಸಿದ್ದಪಡಿಸಿಕೊಳ್ಳಲಾಗುವುದು ಎಂದು ಮಾದಿಗ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಒಂದು ವೇಳೆ ಭವನ ನಿರ್ಮಾಣಕ್ಕೆ ಅನುದಾನ ಕೊರತೆ ಉಂಟಾದರೆ ಹೆಚ್ಚುವರಿ ಅನುದಾನ ಪಡೆದು ಭವನ ನಿರ್ಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರು ಶಾಸಕ ಹಂಪನಗೌಡರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು ಈ ಸಂದರ್ಭದಲ್ಲಿ: ಪಂಚ ಗ್ಯಾರಂಟಿ ಅಧ್ಯಕ್ಷ ಅನಿಲ್ ಕುಮಾರ್. ವೈ ಮುಖಂಡರಾದ ಅಲ್ಲಮಪ್ರಭು ಪೂಜಾರ್. ಅಂಬ್ರೋಸ್. ಡಿಎಚ್. ಪೂಜಾರ್. ವೆಂಕಟೇಶ್ ಗಿರಿಜಾಲಿ. ಹೆಚ್. ಸುಲಂಗಿ. ದುರುಗೇಶ್ ಬಾಲಿ. ಹನುಮಂತಪ್ಪ ಪನ್ನೂರು.ಅಶೋಕ ಮೆಗಲ್ಮನಿ. ಶೆಟ್ಟಿ ಬಾಬು ಇನ್ನು ಅನೇಕರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




