ಯಾದಗಿರಿ : ಜಿಲ್ಲೆಯ ಗುರುಮಿಟ್ಕಲ್ ಪಟ್ಟಣದ ಅತ್ಯಂತ ಪ್ರಸಿದ್ದಿಯನ್ನು ಪಡೆದುಕೊಂಡ ಹೆಡ್ ಹೆಲ್ಡ್ ಹೈ ಫೌಂಡೇಷನ್ ವತಿಯಿಂದ ಸ್ಪೀಕ್ ನೌ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಹಮ್ಮಿಕೊಂಡ ಮೊದಲ ಬ್ಯಾಚನ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಹಾಗೂ ಎರಡನೇ ಬ್ಯಾಚನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನವದರೆಡ್ಡಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂಗ್ಲೀಷ್ ಭಾಷೆಯ ಮಹತ್ವ, ವ್ಯಕ್ತಿತ್ವ ವಿಕಾಸನ, ಸಂವಹನ ಕೌಶಲ್ಯ, ಸಂದರ್ಶನ ಇನ್ನು ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇದೇ ವೇಳೆ ಪ್ರತಿಭಾವಂತರು ಕೆ,ಎಸ್,ಇ,ಟಿ ಹಾಗೂ ನಿಟ್ ಪರೀಕ್ಷೆ ಪಾಸದ ಸರ್ಕಾರಿ ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರಾದ ಶ್ರೀನಿವಾಸ ಅವರು ಉದ್ಯೋಗಿಯಾಗು ಹಾಗೂ ಉದ್ಯೋಗ ನೀಡು ಎಂಬ ಮಾತಿನ ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೇಗೆ ನೌಕರಿಯನ್ನು ಪಡೆದುಕೊಳ್ಳಬೇಕೆನ್ನುವ ಮಾಹಿತಿ ತಿಳಿಸಿಕೊಟ್ಟರು.
ಸಂಸ್ಥೆಯ ತರಬೇತಿದಾರರಾದ ನಾಗೇಶ್ ನಜಾರಪೂರ್ ಅವರು ಮೊದಲ ಬ್ಯಾಚನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು.
45 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು ಎಂಟರಿಂದ ಹತ್ತು ಜನ ವಿದ್ಯಾರ್ಥಿಗಳಿಗೆ ಈಗಾಗಲೇ ವಿವಿಧ ಕಂಪನಿಗಳಲ್ಲಿ ನೌಕರಿ ದೊರೆತ ವಿಷಯವನ್ನು ಪ್ರಸ್ತಾಪಿಸಿದರು.
ಈ ಸಂಧರ್ಭದಲ್ಲಿ ಕುಮಾರ್ ನಿಂಗಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು ನರಸಿಂಹಲು ವಂದನಾರ್ಪಣೆ ಮಾಡಿದರು ಕುಮಾರಿ ಸೋನಿ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




