ಸಿಂಧನೂರು : ತಾಲೂಕು ಆಡಳಿತದ ವತಿಯಿಂದ ತಹಶಿಲ್ ಕಚೇರಿ ಆವರಣದಲ್ಲಿ ಮರಾಠಾ ಸಾಮ್ರಾಜ್ಯದ ಸ್ಥಾಪಕ,ಧೀಮಂತ ಯೋಧ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಜಯಂತಿಯನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ತಹಶಿಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಶಿವಾಜಿ ಮಹಾರಾಜರು 19 ನೇಯ ಫೆಬ್ರವರಿ 1630 ರಂದು ಪುಣೆಯ ಶಿವನೇರಿ ಕೋಟೆಯಲ್ಲಿ ಶಹಾಜಿ ಭೋಂಸ್ಲೆ ಮತ್ತು ಜೀಜಾಬಾಯಿಯವರಿಗೆ ಜನಿಸಿದರು.ಮಹಾತ್ಮಾ ಜ್ಯೋತಿಬಾ ಫುಲೆ 1870 ರಲ್ಲಿ ಶಿವ ಜಯಂತಿಯನ್ನು ಪ್ರಾರಂಭಿಸಿದರು, ನಂತರ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರನ್ನು ಒಗ್ಗೂಡಿಸಲು ಇದನ್ನು ಜನಪ್ರಿಯಗೊಳಿಸಿದರು.. ಈ ದಿನವು ಅವರ ಶೌರ್ಯ, ಗೆರಿಲ್ಲಾ ಯುದ್ಧತಂತ್ರ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಸ್ಮರಿಸುತ್ತದೆ ಎಂದರು.
ಈ ವೇಳೆ ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಪಿಎಲ್ ಡಿಬಿ ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡಬಸವರಾಜ ಸೇರಿದಂತೆ ಅನೇಕರು ಮಾತನಾಡಿದರು, ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಪೌರಾಯುಕ್ತ ಪಾಂಡುರಂಗ ಇಟಿಗಿ,ಮುಖಂಡರಾದ ರಾಜಶೇಖರ ಪಾಟೀಲ್, ಮರಿಯಪ್ಪ ಬಿಎಸ್ಪಿ,ಅಭಿಷೇಕ್ ನಾಡಗೌಡ,ನಾಗೋಜಿರಾವ್,ರಾಘವೇಂದ್ರ ಪವರ್, ಶ್ರೀನಿವಾಸ ನಿಕ್ಕಂ, ಶೇಖರಪ್ಪ ಪವರ್, ಸುಭಾಷ್ ಪವರ್, ಹನುಮೇಶ್ ಗುಂಜಳಿ,ವಂಕೋಬ
ರಾವ್,ನಾರಾಯಣಪ್ಪ ಪವರ್ ಸೇರಿದಂತೆ ಅನೇಕರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




