Ad imageAd image

ಜೇವರ್ಗಿ ಪಟ್ಟಣದಲ್ಲಿ ಕರ್ನಾಟಕ ಮಾದರ ಮಹಾಸಭಾ ರಿ ಸದಸ್ಯತ್ವ ಅಭಿಯಾನ

Bharath Vaibhav
ಜೇವರ್ಗಿ ಪಟ್ಟಣದಲ್ಲಿ ಕರ್ನಾಟಕ ಮಾದರ ಮಹಾಸಭಾ ರಿ ಸದಸ್ಯತ್ವ ಅಭಿಯಾನ
WhatsApp Group Join Now
Telegram Group Join Now

ಕಲಬುರಗಿ: ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಕರ್ನಾಟಕ ಮಾದರ ಮಹಾಸಭಾ ರಿ ಸದಸ್ಯತ್ವ ಅಭಿಯಾನ ಜೇವರ್ಗಿ ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮಾದರ ಮಹಾಸಭಾ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನೆರವೇರಲಾಯಿತು.ಈ ಕಾರ್ಯಕ್ರಮದಲ್ಲಿ ಮಾದರ ಮಹಾಸಭಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಚಂದ್ರಿಕಾ ಪರಮೇಶ್ವರ್ ಮಾತನಾಡಿ ಮಾದಿಗ ಸಮುದಾಯ ಆರ್ಥಿಕ ಶೈಕ್ಷಣಿಕ ಔಧ್ಯಗಿಕವಾಗಿ ಬಹಳ ಹಿಂದುಳಿದ ಸಮಾಜ ವಾಗಿದ್ದು ಈ ಸಮಾಜ ಮುಂದೆ ಬರಬೇಕಾದರೆ ಮಾದರ ಮಹಾಸಭಾದ ಸದಸ್ಯರಾಗಿ ಜಾಗೃತಗೋಳಬೇಕಾಗಿದೆ ಎಂದು ಹೇಳಿದರು ಮಾದರ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಗೋಪಾಲರಾವ ಕಟ್ಟಿಮನಿ ಅವರು ಮಾತನಾಡಿ ಮಾದಿಗ ಸಮಾಜ ಒಗ್ಗಟ್ಟಾಗಿ ಇದ್ದರೆ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಜು ವಾಡೇಕರ್ ಜಿಲ್ಲಾ ನಾಯಕರಾದ ಲಿಂಗರಾಜ ತಾರಫೈಲ್ ಕಾರ್ಯಕ್ರಮ ಅಧ್ಯಕ್ಷತೆ ಕಂಟೆಪ್ಪಾ ಮಾಸ್ಟರ್ ಹರವಾಳ ವಹಿಸಿದರು

ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಎಂ ದಿನ್ನಿ ಸುಭಾಷ್ ಕಾಂಬಳೆ ಗೊಲ್ಲಳಪ್ಪ ಯತ್ನಾಳ್ ಭಾಗಪ್ಪ ಯಲಗೋಡ ವಿಜಯಲಷ್ಮಿ ಆಂದೋಲಾ ಮರೆಪ್ಪ ಕೋಬಾಳ ಪರಶುರಾಮ್ ಮುದಬಾಳ ಬಿ ಸೈದಪ್ಪ ಇಜೇರಿ ಮುತ್ತು ಬಡಿಗೇರ ಚಂದ್ರು ಕೋರೆ ಸೋಮರಾಯ ಡೊಳ್ಳೆ ಭೀಮು ದೊಡ್ಡಮನಿ.ಭೀಮು ನರಿಬೋಳ .ರಾಜು ದೊಡ್ಡಮನಿ .ಭೀಮು ಹಾದಿಮನಿ. ಜಾನಪ್ಪ ಗುಡುರ .ಇನ್ನು ಅನೇಕ ಜೇವರ್ಗಿ ತಾಲೂಕಿನ ಸುತ್ತಮುತ್ತಲಿನ ಮಾದಿಗ ಸಮುದಾಯದ ತಾಯಂದರು ಹಿರಿಯರು ಯುವಕರು ಪ್ರಗತಿಪರ ಚಿಂತಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಭೀಮರಾಯ ಎಂ ಹಳ್ಳಿ ಮಾಡಿದರು ಸ್ವಾಗತ ವನ್ನ ಅನಿಲ ದೊಡ್ಡಮನಿ ನೀರವೆರಿಸಿದರು ವಂದನಾರ್ಪಣೆ ಮುತ್ತು ಬಿಲ್ಲಡ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.
ವರದಿ :ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!