ಹುಬ್ಬಳ್ಳಿ : ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಿತ್ತೂರ ತಾಲ್ಲೂಕಿನ Mk ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂಬಾಗದಲ್ಲಿ ನಿನ್ನೆಯಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರಮುಖ ಬೇಡಿಕೆಗಳು ಆದ ಬಾಬು ಜಗ ಜೀವನ್ ರಾಮ್ ಭವನ ಜಗದ ಅತಿಕ್ರಮಣ ತೆರವು ಮಾಡುವುದು, ಸರ್ಕಾರಿ ಹೆಣ್ಣುಮಕ್ಕಳ ಶಾಲೆಗೆ ಸುತ್ತಲೂ ಆವರಣ ಗೋಡೆ ನಿರ್ಮಿಸುವುದು, ಪೊಲೀಸ್ ಠಾಣೆ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಸಹ ಅಹೋರಾತ್ರಿ ಧರಣಿ ಮುಂದುವರೆದಿದೆ.
ಇಂದು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕೋನಳ್ಳಿ ಹಾಗೂ ಸಹಾಯಕ ನಿರ್ದೇಶಕ ಉಳ್ಳಾಗಡ್ಡಿ ಇವರ ಮನವಿ ಸ್ವೀಕಾರ ಮಾಡಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಮಾತನಾಡಿದರು. ಇದಕ್ಕೂ ಮುನ್ನ ಹೋರಾಟಗಾರರು ಆದ ರಾಜಶೇಖರ್ ಹಿಂಡಲಗಿ ಸೇರಿದಂತೆ ವಿವಿಧ ಹೋರಾಟ ಗಾರರು ಮಾತನಾಡಿದ್ದಾರೆ.
ವರದಿ : ಬಸವರಾಜು.




