ಅಥಣಿ : 9ನೇ ತರಗತಿ ವಿದ್ಯಾರ್ಥಿನಿ ಯೋರ್ವಳು ಡಯಾಬಿಟಿಸ್ ನಿಂದ ಮೃತಪಟ್ಟಿರುವ ಘಟನೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.
ಆಂಜಲಿ ಮಂಜುನಾಥ ಗುಜ್ಜರ ಮೃತ ದುರ್ದೈವಿ. ಕೆಲವು ದಿನಗಳಿಂದ ಬಾಲಕಿ ಅನಾರೋಗ್ಯದಿಂದ ಬಳಲುತಿದ್ದಳು. ಬಾಲಕಿ ತಾಂವಶಿ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯಲ್ಲಿ ಓದುತ್ತಿದ್ದಳು. ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಶಾಲಾ ವಿದ್ಯಾರ್ಥಿಗಳು ಮತ್ತು ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ಅಥಣಿ ಪೋಲಿಸ್ ಠಾಣಾ ಮ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ : ನ್ಯೂಸ್ ಡೆಸ್ಕ್ ಬೆಳಗಾವಿ




