ಶರೀಫರ ಜಾತ್ರೆಯಲಿ ಅಕ್ರಮಜೂಜಾಟ ಬಲು ಜೋರೋ ಜೋರು..
ಕಂಡರೂ ಕಾಣದಂತೆ ವರ್ತನೆ ತೋರುತ್ತಿದ್ದಾರೆ ಹೂಲಗೂರು ಪೊಲೀಸರು..
50 ರುಪಾಯಿ ಜೂಜು ಕಟ್ಟಿದರೆ 150 ಕೊಡುತ್ತೇವೆ ಎಂದು ಮೋಸ ಮಾಡುತ್ತಿದ್ದಾರೆ ಈ ಕಿಡಿಗೇಡಿಗಳು..
ಇದನೆಲ್ಲ ಕಂಡರೂ ಹೂಲಗೂರು ಪೊಲೀಸರು ಗಪ್ ಚುಪ್ ಇರುವುದಾದರೂ ಏಕೆ..?
ಶಿಗ್ಗಾಂವಿ ಪಟ್ಟಣದ ಶಿಶುವಿನಾಳದಲಿ ಇಂದಿನಿಂದ ಶಿಶುವಿನಾಳ ಶರೀಫರ ಜಾತ್ರೆ ಆರಂಭವಾಗಿದೆ ಹಿಂದೂ ಮುಸ್ಲಿಂ ಭಾವುಕ್ಯತೆ ಜಾತ್ರೆ ಎಂದು ಕರೆಯಲ್ಪಡುವ ಈ ಜಾತ್ರೆಯಲ್ಲಿ ಅಕ್ರಮ ಜೂಜಾಟ ಜೋರಾಗಿ ನಡೆಯುತ್ತದೆ.
ಸುತ್ತ ಮುತ್ತಲಿನ ಹಳ್ಳಿಗಳು ಮತ್ತು ನಗರಗಳಿಂದ ಸಾವಿರಾರು ಜನರ ತಮ್ಮ ಕುಟುಂಬ ಸಮೇತ ಈ ಜಾತ್ರೆಗೆ ಆಗಮಿಸುತ್ತಾರೆ ಆದರೆ ಈ ಜಾತ್ರೆಯಲಿ 10ಕ್ಕೆ 100 .20 ಕ್ಕೆ 400 ರಮ್ಯಾ ಹಾಗೆ ಲಕ್ಷ್ಮೀದೇವಿ ಫೋಟೋಗಳಿಗೆ ಜೂಜು ಕಟ್ಟಿ ಆಡುತ್ತಿದ್ದಾರೆ.
ಹುಲಗುರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಜಾತ್ರೆ ನಡೆಯುತ್ತಿದೆ.. ಆದರೆ ಪೊಲೀಸರ ಮುಂದೆಯೇ ಈ ಜೂಜಾಟ ನಡೆಯುತಿದ್ರು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಜಾತ್ರೆಯಲ್ಲಿ ಅಕ್ರಮ ಜುಜಾಟಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ ಪೊಲೀಸ್ ಇಲಾಖೆ ಇಂತಹ ಜೂಜಾಟಗಳಿಗೆ ಕಡಿವಾಣ ಹಾಕಬೇಕು. ಕಾದು ನೋಡೋಣ ಅಧಿಕಾರಿಗಳು ಯಾವ ರೀತಿ ಕ್ರಮ ಜರುಗಿಸುತ್ತಾರೆ ಅನ್ನೋದನ..
ವರದಿ : ರಮೇಶ್ ತಾಳಿಕೋಟಿ




